ಐದು ಕ್ಷೇತ್ರಗಳಲ್ಲಿ ಮಾತ್ರ ಬಿಎಸ್ಆರ್ ಸ್ಪರ್ಧೆ
ಚಿತ್ರದುರ್ಗ, ಡಿ. 19 : ಬಿಜೆಪಿ ಸೇರುವ ಅಥವ ಬಿಜೆಪಿಯೊಂದಿಗೆ ಪಕ್ಷವನ್ನು ವಿಲೀನಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀರಾಮುಲು ಹೇಳಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ
ಬುಧವಾರ
ಮಾತನಾಡಿದ
ಬಿಎಸ್ಆರ್
ಕಾಂಗ್ರೆಸ್
ಅಧ್ಯಕ್ಷ
ಬಿ.ಶ್ರೀರಾಮುಲು,
ಬಿಜೆಪಿ,
ಜೆಡಿಎಸ್
ಸೇರಿದಂತೆ
ಯಾವುದೇ
ಪಕ್ಷದೊಂದಿಗೂ
ಹೊಂದಾಣಿಕೆ
ಮಾಡಿಕೊಳ್ಳುವುದಿಲ್ಲ.
ಅಲ್ಲದೆ,
ಯಾವುದೇ
ಪಕ್ಷದ
ಜೊತೆಗೆ
ಬಿಎಸ್ಸಾರ್
ಕಾಂಗ್ರೆಸ್ನ
ವಿಲೀನಗೊಳಿಸುವುದಿಲ್ಲ
ಎಂದು
ಅವರು
ಹೇಳಿದರು.
[ಪ್ರಧಾನಿ
ಪಟ್ಟಕ್ಕೆ
ಮೋದಿ'
ಶ್ರೀರಾಮುಲು
ಪಕ್ಷ
ಜಪ]
ಮುಂದಿನ ಲೋಕಸಭೆ ಚುನಾವಣೆಗೆ 5 ಕ್ಷೇತ್ರದಿಂದ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಾಗುವುದು ಎಂದು ಅವರು ತಿಳಿಸಿದರು. ಲೋಕಸಭೆ ಚುನಾವಣೆಗೆಗಾಗಿ ಪ್ಷಕ ಸಂಘಟನೆ ಮಾಡುವತ್ತ ಹೆಚ್ಚಿನ ಗಮನವಹಿಸಲಾಗಿದೆ ಎಂದು ಅವರು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಹಾವೇರಿ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈ ಕ್ಷೇತ್ರಗಳಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಲಾಗುವುದು ಎಂದು ಶ್ರೀರಾಮುಲು ಹೇಳಿದರು.
ಬಿಜೆಪಿಯಿಂದ ಆಹ್ವಾನ ಬಂದಿಲ್ಲ : ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಗೆ ಮರಳುತ್ತೇನೆ, ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಪ್ರಸ್ತಾಪವೂ ಇಲ್ಲ. ಬಿಜೆಪಿಗೆ ಮರಳುವಂತೆ ಯಾವ ನಾಯಕರು ನಮಗೆ ಆಹ್ವಾನ ನೀಡಿಲ್ಲ ಎಂದು ಅವರು ಹೇಳಿದರು.