ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭದ್ರಾ ಯೋಜನೆ ಮುಗಿಯುವ ಮುನ್ನವೇ ಹೊಸದುರ್ಗದಲ್ಲಿ ಕೊಚ್ಚಿ ಹೋದ ಕಾಲುವೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 13: ಮಧ್ಯ ಕರ್ನಾಟಕದ ಮಹತ್ವದ ನೀರು ಹರಿಸುವ ಯೋಜನೆಯಾದ ಭದ್ರಾ ಮೇಲ್ದಂಡೆ ಕಾಮಗಾರಿ ಸುಮಾರು ಹತ್ತು ವರ್ಷಗಳಿಂದ ನಡೆಯುತ್ತಿದೆ. ಆದರೂ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ಮತ್ತೊಮ್ಮೆ ಅಭದ್ರತೆ ಕಂಡುಬಂದಿದೆ.

ಕಾಮಗಾರಿಯು ಪೂರ್ಣಗೊಳ್ಳುವ ಮೊದಲೇ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೊಡ್ಡಕಿಟ್ಟದಹಳ್ಳಿ ಬಳಿ ಎರಡು ದಿನಗಳಿಂದ ಸುರಿದ ಅಲ್ಪ ಮಳೆಗೆ ಕಾಲುವೆ ಕೊಚ್ಚಿ ಹೋಗಿದೆ. ಉತ್ತರ ಕರ್ನಾಟಕದಲ್ಲಿ ಬಂದಂತಹ ಮಳೆ ಇಲ್ಲಿ ಸುರಿದಿದ್ದರೆ ಕಾಲುವೆ ಕಣ್ಣಿಗೆ ಕೂಡ ಕಾಣುತ್ತಿರಲಿಲ್ಲ.

ಚಿತ್ರದುರ್ಗದಲ್ಲಿ ನಿರಂತರ ಮಳೆ; ವಿವಿ ಸಾಗರದಲ್ಲಿ 5 ಅಡಿ ಮಳೆ ನೀರುಚಿತ್ರದುರ್ಗದಲ್ಲಿ ನಿರಂತರ ಮಳೆ; ವಿವಿ ಸಾಗರದಲ್ಲಿ 5 ಅಡಿ ಮಳೆ ನೀರು

ಹಾಗಾಗಿ ಅಲ್ಪ ಮಳೆಗೆ ಕೊಚ್ಚಿಹೋಗಿರುವ ಕಾಲುವೆ ಭಾರೀ ಮಳೆಗೆ ತಡೆಯುವುದೇ? ಈ ಹಿಂದೆ ತರೀಕೆರೆ ತಾಲೂಕಿನ ಹಳಿಯೂರು ಬಳಿ ನಾಲೆ ಇದೆ ರೀತಿ ಕುಸಿತ ಕಂಡಿತ್ತು. ಈಗ ಹೊಸದುರ್ಗ ಹತ್ತಿರ ಮತ್ತೊಂದು ಕಡೆ ಕುಸಿದಿರುವುದು ಏಕೆ ಎಂದು ಪ್ರಶ್ನಿಸುವ ಮೂಲಕ ಕಳಪೆ ಕಾಮಗಾರಿ ನಡೆದಿದೆ ಎಂದು ರೈತರು ಆರೋಪಿಸಿದ್ದಾರೆ.

Bhadra Channel

ವಿವಿ ಸಾಗರ ತಲುಪದ ಭದ್ರೆ
ಸುಮಾರು 18 ಸಾವಿರ ಕೋಟಿ ರುಪಾಯಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಆರಂಭಗೊಂಡು ಸುಮಾರು ಹತ್ತು ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ. ಆದರೂ ರೈತರಿಗೆ ಇದರ ಬಗ್ಗೆ ಬಹು ನಿರೀಕ್ಷೆಗಳಿವೆ. ಅಕ್ಟೋಬರ್ 1ರಂದು ಪ್ರಾಯೋಗಿಕವಾಗಿ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸಲು ಬೆಟ್ಟದತಾವರೆಕೆರೆ ಹತ್ತಿರ ಪಂಪ್ ಮೂಲಕ ಲಿಪ್ಟ್ ಮಾಡಿದ್ದರು.

ಆದರೂ ಇದುವರೆಗೂ ನೀರು ವಿವಿ ಸಾಗರ ತಲುಪಿಲ್ಲ. ಅಕ್ಟೋಬರ್ ಒಂದಕ್ಕೆ ನೀರು ಬಿಡುವುದಾಗಿ ಸಿಎಂ ಸಭೆಯಲ್ಲಿ ವಿಶ್ವೇಶರಯ್ಯ ಜಲನಿಗಮದ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಅಧಿಕಾರಿಗಳು ಹೇಳಿ ಹದಿನೈದು ದಿನ ಕಳೆಯುತ್ತಾ ಬಂದರೂ ನೀರು ಬಾರದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

English summary
Bhadra project still going on from past 10 years. Channel washed away due to rain in Doddakittadahalli, Chitradurga district, Hosadurga taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X