ಭದ್ರಾ ಯೋಜನೆ ಮುಗಿಯುವ ಮುನ್ನವೇ ಹೊಸದುರ್ಗದಲ್ಲಿ ಕೊಚ್ಚಿ ಹೋದ ಕಾಲುವೆ
ಚಿತ್ರದುರ್ಗ, ಅಕ್ಟೋಬರ್ 13: ಮಧ್ಯ ಕರ್ನಾಟಕದ ಮಹತ್ವದ ನೀರು ಹರಿಸುವ ಯೋಜನೆಯಾದ ಭದ್ರಾ ಮೇಲ್ದಂಡೆ ಕಾಮಗಾರಿ ಸುಮಾರು ಹತ್ತು ವರ್ಷಗಳಿಂದ ನಡೆಯುತ್ತಿದೆ. ಆದರೂ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ಮತ್ತೊಮ್ಮೆ ಅಭದ್ರತೆ ಕಂಡುಬಂದಿದೆ.
ಕಾಮಗಾರಿಯು ಪೂರ್ಣಗೊಳ್ಳುವ ಮೊದಲೇ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೊಡ್ಡಕಿಟ್ಟದಹಳ್ಳಿ ಬಳಿ ಎರಡು ದಿನಗಳಿಂದ ಸುರಿದ ಅಲ್ಪ ಮಳೆಗೆ ಕಾಲುವೆ ಕೊಚ್ಚಿ ಹೋಗಿದೆ. ಉತ್ತರ ಕರ್ನಾಟಕದಲ್ಲಿ ಬಂದಂತಹ ಮಳೆ ಇಲ್ಲಿ ಸುರಿದಿದ್ದರೆ ಕಾಲುವೆ ಕಣ್ಣಿಗೆ ಕೂಡ ಕಾಣುತ್ತಿರಲಿಲ್ಲ.
ಚಿತ್ರದುರ್ಗದಲ್ಲಿ ನಿರಂತರ ಮಳೆ; ವಿವಿ ಸಾಗರದಲ್ಲಿ 5 ಅಡಿ ಮಳೆ ನೀರು
ಹಾಗಾಗಿ ಅಲ್ಪ ಮಳೆಗೆ ಕೊಚ್ಚಿಹೋಗಿರುವ ಕಾಲುವೆ ಭಾರೀ ಮಳೆಗೆ ತಡೆಯುವುದೇ? ಈ ಹಿಂದೆ ತರೀಕೆರೆ ತಾಲೂಕಿನ ಹಳಿಯೂರು ಬಳಿ ನಾಲೆ ಇದೆ ರೀತಿ ಕುಸಿತ ಕಂಡಿತ್ತು. ಈಗ ಹೊಸದುರ್ಗ ಹತ್ತಿರ ಮತ್ತೊಂದು ಕಡೆ ಕುಸಿದಿರುವುದು ಏಕೆ ಎಂದು ಪ್ರಶ್ನಿಸುವ ಮೂಲಕ ಕಳಪೆ ಕಾಮಗಾರಿ ನಡೆದಿದೆ ಎಂದು ರೈತರು ಆರೋಪಿಸಿದ್ದಾರೆ.
ವಿವಿ
ಸಾಗರ
ತಲುಪದ
ಭದ್ರೆ
ಸುಮಾರು
18
ಸಾವಿರ
ಕೋಟಿ
ರುಪಾಯಿಯಲ್ಲಿ
ಕಾಮಗಾರಿ
ನಡೆಯುತ್ತಿದ್ದು,
ಕಾಮಗಾರಿ
ಆರಂಭಗೊಂಡು
ಸುಮಾರು
ಹತ್ತು
ವರ್ಷ
ಕಳೆದರೂ
ಯೋಜನೆ
ಪೂರ್ಣಗೊಂಡಿಲ್ಲ.
ಆದರೂ
ರೈತರಿಗೆ
ಇದರ
ಬಗ್ಗೆ
ಬಹು
ನಿರೀಕ್ಷೆಗಳಿವೆ.
ಅಕ್ಟೋಬರ್
1ರಂದು
ಪ್ರಾಯೋಗಿಕವಾಗಿ
ವಿವಿ
ಸಾಗರ
ಜಲಾಶಯಕ್ಕೆ
ನೀರು
ಹರಿಸಲು
ಬೆಟ್ಟದತಾವರೆಕೆರೆ
ಹತ್ತಿರ
ಪಂಪ್
ಮೂಲಕ
ಲಿಪ್ಟ್
ಮಾಡಿದ್ದರು.
ಆದರೂ ಇದುವರೆಗೂ ನೀರು ವಿವಿ ಸಾಗರ ತಲುಪಿಲ್ಲ. ಅಕ್ಟೋಬರ್ ಒಂದಕ್ಕೆ ನೀರು ಬಿಡುವುದಾಗಿ ಸಿಎಂ ಸಭೆಯಲ್ಲಿ ವಿಶ್ವೇಶರಯ್ಯ ಜಲನಿಗಮದ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಅಧಿಕಾರಿಗಳು ಹೇಳಿ ಹದಿನೈದು ದಿನ ಕಳೆಯುತ್ತಾ ಬಂದರೂ ನೀರು ಬಾರದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.