ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಳವಾಯಿಕಟ್ಟೆ ಗ್ರಾಮಸ್ಥರಿಂದ ಹಲ್ಲೆಗೊಳಗಾಗಿದ್ದ ಕರಡಿ ಸಾವು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 14: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದಳವಾಯಿಕಟ್ಟೆ ಗ್ರಾಮದಲ್ಲಿ ಜನರಿಂದ ಹಲ್ಲೆಗೊಳಗಾದ ಕರಡಿ ಸಾವನ್ನಪ್ಪಿದೆ.

ಪ್ರಾಣಿ ಸಂಗ್ರಹಾಲಯ ಸೇರಿದ ದಳವಾಯಿಕಟ್ಟೆ ಕರಡಿ; ಅಸಹಾಯಕ ಅರಣ್ಯ ಇಲಾಖೆಪ್ರಾಣಿ ಸಂಗ್ರಹಾಲಯ ಸೇರಿದ ದಳವಾಯಿಕಟ್ಟೆ ಕರಡಿ; ಅಸಹಾಯಕ ಅರಣ್ಯ ಇಲಾಖೆ

ಶನಿವಾರ ಸೆಪ್ಟೆಂಬರ್ 13ರಂದು ಹೊಸದುರ್ಗದ ದಳವಾಯಿ ಕಟ್ಟೆ ಎಂಬಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರ ಮೇಲೆ ಕರಡಿಯೊಂದು ದಾಳಿ ಮಾಡಿದ್ದು, ದಾಳಿಯಲ್ಲಿ ನಾಲ್ಕೈದು ಜನ ಗಾಯಗೊಂಡಿದ್ದರು. ಅದರಲ್ಲಿ ಬುಕ್ಕಸಾಗರದ ರಾಜಪ್ಪ‌ (50) ಎಂಬ ವ್ಯಕ್ತಿ ಮೃತ ಪಟ್ಟಿದ್ದರು. ಇದರಿಂದ ಆಕ್ರೋಶಗೊಂಡ ಜನರು ಕರಡಿ ಮೇಲೆ ಹಲ್ಲೆ ನಡೆಸಿದ್ದರು. ಕಲ್ಲು, ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದರು.

Bear Beaten By Villagers Died Today In Adumalleshwara Zoo

ಅಧಿಕಾರಿಗಳು ಕರಡಿಯನ್ನು ವಶಕ್ಕೆ ಪಡೆದು ಚಿಕಿತ್ಸೆ ನೀಡಿ ಚಿತ್ರದುರ್ಗ ಸಮೀಪದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ರಾತ್ರಿ ಬಿಟ್ಟಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕರಡಿ ಕೊನೆಗೂ ಕೊನೆಯುಸಿರೆಳೆದಿದೆ.

English summary
A bear which was beaten by people in a village in Dalwayikatte village in Hosurdurga taluk in Chitradurga died today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X