ಅಗ್ನಿಪಥ್ ಯೋಜನೆ ವಿರೋಧಿಸಿ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ
ಚಿತ್ರದುರ್ಗ, ಜೂ27: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಚಿತ್ರದುರ್ಗ ಜಿಲ್ಲೆಯಾದ್ಯಂತ ಸೋಮವಾರ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿ ಮುಂದೆ ಸ್ಥಳೀಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಗ್ನಿಪಥ್ ಯೋಜನೆ ಯುವ ಜನರನ್ನು ದಾರಿ ತಪ್ಪಿಸುವ ಯೋಜನೆಯಾಗಿದೆ. ಕೇವಲ ನಾಲ್ಕು ವರ್ಷಗಳ ಕಾಲ ಮಾತ್ರ ಕೆಲಸ ನೀಡಿ, ನಂತರ ನಿರುದ್ಯೋಗಿಗಳನ್ನಾಗಿ ಮಾಡುವ ಯೋಜನೆ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿ ಸಾಗರ, ಗಾಯಿತ್ರಿ ಜಲಾಶಯ ವೀಕ್ಷಿಸಿದ ಯದುವೀರ್ ಅರಸ್
ಯುವಕರು ಸರ್ಕಾರಿ ಹುದ್ದೆಗಳ ಅವಕಾಶಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಯೋಜನೆಯ ಖಾಸಗಿ ಕಂಪನಿಗಳು ಮತ್ತು ಏಜೆನ್ಸಿಗಳು ವ್ಯವಸ್ಥಿತವಾಗಿ ಲಾಭ ಪಡೆದುಕೊಳ್ಳುವುದಕ್ಕೆ ಮಾಡಲಾಗಿದೆ. ಸೈನ್ಯದಲ್ಲೂ ಗುತ್ತಿಗೆ ಪದ್ಧತಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಚಳ್ಳಕೆರೆಯಲ್ಲಿ ಶಾಸಕ ಟಿ. ರಘುಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಬಳಿಕ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪಠ್ಯ ಪುಸ್ತಕ ಪರಿಷ್ಕರಣೆ; ಸರ್ಕಾರದ ವಿರುದ್ಧ ರಮೇಶ್ ಕುಮಾರ್ ಗರಂ
ಬಿಜೆಪಿ ಯುವಕರನ್ನು ದಿಕ್ಕುತಪ್ಪಿಸುವ ಕೆಲಸ
ಹಿರಿಯೂರು ನಗರದ ಬಿಇಓ ಕಛೇರಿ ಮುಂಭಾಗದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದರು. ಬಿಜೆಪಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದು ಯುವಕರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಒಂದು ವೇಳೆ ಯೋಜನೆ ಜಾರಿಗೆ ತರುವುದಾದರೆ ಮೊದಲು ಬಿಜೆಪಿ ನಾಯಕರ ಮಕ್ಕಳನ್ನು ಸೇನೆಗೆ ಸೇರಿಸಲಿ ನೋಡೋಣ ಎಂದು ಸವಾಲು ಹಾಕಿದರು. ಇಂತಹ ಯೋಜನೆಗಳನ್ನು ಜಾರಿಗೆ ತಂದು ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರ ಹಾಕಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಡಿ. ಸುಧಾಕರ್, ನಗರಸಭೆ ಸದಸ್ಯರು ಸೇರಿದಂತೆ ಮತ್ತಿತರರು ಹಾಜರಿದ್ದರು.
ಕಮೀಷನ್ ಆಸೆಗಾಗಿ ಬಿಜೆಪಿ ಸರ್ಕಸ್
"ಸರ್ವಾಧಿಕಾರಿ ಧೋರಣೆ ಮಾಡಿಕೊಂಡು ಬಂದಿರುವ ಬಿಜೆಪಿಯಿಂದ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಾಗಿದೆ. ಯಾರಾದರೂ ಸ್ವಲ್ಪ ಜೋರಾಗಿ ಮಾತಾಡಿದರೆ ಅವರ ವಿರುದ್ಧ ಇಡಿ, ಆದಾಯ ತೆರಿಗೆ, ಸಿಬಿಐ ಕಳಿಸಿ ದಾಳಿ ಮಾಡಿಸುತ್ತಾರೆ. ಅಗ್ನಿಪಥ್ ಯೋಜನೆ ಅವೈಜ್ಞಾನಿಕವಾಗಿ ಜಾರಿಗೆ ತರುತ್ತಿದ್ದಾರೆ. ಈ ಯೋಜನೆ ವಾಪಸ್ ಪಡೆಯುವವರೆಗೂ ಹೋರಾಟ ಮಾಡೋಣ" ಎಂದು ಮಾಜಿ ಸಚಿವ ಹೆಚ್. ಆಂಜನೇಯ ಕರೆ ನೀಡಿದರು.
ಹೊಳಲ್ಕೆರೆ ಪಟ್ಟಣದಲ್ಲಿ ಯೋಜನೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಆಂಜನೇಯ ಮಾತನಾಡಿ, "ಕಮೀಷನ್ ಸಿಗುತ್ತದೆ ಎಂಬ ಆಸೆಗಾಗಿ ಬಿಜೆಪಿ ಏನೆಲ್ಲಾ ಸರ್ಕಸ್ ಮಾಡುತ್ತಿದೆ. ಇಂತಹ ಸರ್ಕಾರದ ವಿರುದ್ಧ ಇಂದಿನ ಯುವ ಜನತೆ ಸಿಡಿದೇಳಬೇಕು. ದೇಶದಿಂದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಯುವಕರು ಮುಂದಾಗಬೇಕು. ದೇಶದಲ್ಲಿ ಜಯಪ್ರಕಾಶ್ ಹೆಗ್ಡೆ ಅಂತ ಚಳುವಳಿ ನಡೆಸಬೇಕು" ಎಂದರು.
ಅಗ್ನಿಪಥ್ ಯೋಜನೆಯನ್ನು ನಿವೃತ್ತ ಸೇನಾಧಿಕಾರಿಗಳಿಂದ ತಿರಸ್ಕಾರ
ಕೇಂದ್ರ
ಸರ್ಕಾರವು
ಸಶಸ್ತ್ರ
ಪಡೆಗಳ
ನೇಮಕಾತಿಗಾಗಿ
ಹೊಸದಾಗಿ
ಘೋಷಿಸಿದ
ಅಗ್ನಿಪಥ್
ಯೋಜನೆಯನ್ನು
ವಿರೋಧಿಸಿ
ಕಾಂಗ್ರೆಸ್
ಪ್ರತಿಭಟನೆ
ನಡೆಸುತ್ತಿದೆ.
ಸರ್ಕಾರದ
ವಿರುದ್ಧ
ಆಕ್ರೋಶ
ವ್ಯಕ್ತಪಡಿಸಿದ
ಕಾಂಗ್ರೆಸ್
ಮುಖಂಡರು
ಮತ್ತು
ಬೆಂಬಲಿಗರು
ಯೋಜನೆಯನ್ನು
ಕಟುವಾಗಿ
ಟೀಕಿಸಿದರು.
ದೇಶದ
ಯುವಕರಿಗೆ
ಯೋಜನೆ
ಪ್ರಯೋಜನಕಾರಿಯಾಗಿಲ್ಲ,
ಅಲ್ಲದೇ
ರಾಷ್ಟ್ರೀಯ
ಭದ್ರತೆಗೆ
ಅಪಾಯಕಾರಿ
ಆಗಿದೆ
ಎಂದು
ದೂರಿದರು.
ಯೋಜನೆಯನ್ನು
ನಿವೃತ್ತ
ಸೇನಾಧಿಕಾರಿಗಳು
ತಿರಸ್ಕರಿಸಿದ್ದಾರೆ.
ಈ
ಯೋಜನೆಯು
ಯಾವುದೇ
ರೀತಿಯಲ್ಲಿ
ದೇಶದ
ಹಿತಾಸಕ್ತಿಗಾಗಿ
ಅಲ್ಲ,
ಯುವಜನರ
ಹಿತಾಸಕ್ತಿಗಾಗಿ
ಅಲ್ಲ.
ಸರ್ಕಾರ
ಯೋಜನೆ
ಹಿಂಪಡೆಯಬೇಕು
ಎಂದು
ಕಾಂಗ್ರೆಸ್
ಒತ್ತಾಯಿಸುತ್ತಿದೆ.
ಜಿಲ್ಲೆಗಳಲ್ಲಿ ಯೋಜನೆ ವಿರೋಧಿಸಿ ಪ್ರತಿಭಟನೆ, ಸತ್ಯಗ್ರಹ
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅಗ್ನಿಪಥ್ ವಿರುದ್ಧ ಪ್ರತಿಭಟನೆ ನಡೆಸಿ ಜನರಿಗೆ ಎಲ್ಲವನ್ನೂ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರಬಾರದು. ಮೊದಲಿನಂತೆ ಸೇನೆಗೆ ನೇಮಕಾತಿಗಳು ನಡೆಯಬೇಕು. ಒಂದು ವೇಳೆ ಸೇನಾ ಯೋಧರಿಗೆ ಸಂಬಳ ಮತ್ತು ಪಿಂಚಣಿ ನೀಡಲು ಹಣದ ತೊಂದರೆ ಇದ್ದರೆ ಯಾವುದಾದರೂ ಸೆಸ್ ಹಾಕಿ ದೇಶ ಕಾಯುವ ಸೈನಿಕರಿಗೆ ನೆರವಾಗಲಿ ಎಂದು ಕಾಂಗ್ರೆಸ್ ಹೇಳಿದೆ.
ಅಗ್ನಿಪಥ್ ಯೋಜನೆಯಿಂದ ಯುವಕರು ವಿದ್ಯಾಭ್ಯಾಸ ಮೊಟಕಾಗುತ್ತದೆ. ಯೋಜನೆಗೆ ಬಿಜೆಪಿ ನಾಯಕರುಗಳು ತಮ್ಮ ಮಕ್ಕಳನ್ನು ಕಳುಹಿಸಲಿ. ಬಿಜೆಪಿ ನಾಯಕರ ಮಕ್ಕಳು ಮಾತ್ರ ದೊಡ್ಡ ದೊಡ್ಡ ಹುದ್ದೆಗಳನ್ನು ಹಿಡಿಯಬೇಕು. ಆದರೆ ಬೇರೆಯವರ ಮಕ್ಕಳು ಸೆಕ್ಯುರಿಟಿ ಗಾರ್ಡ್ಗಳಾಗಿರಬೇಕು ಎಂದು ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದರು.