ಕೆಂಡ ಹಾಯುವಾಗ ದೇವರ ಮೂರ್ತಿಯೊಂದಿಗೆ ಬಿದ್ದ ಭಕ್ತರು
ಚಿತ್ರದುರ್ಗ, ಅಕ್ಟೋಬರ್ 30: ಜಾತ್ರೆಯಲ್ಲಿ ಕೆಂಡ ಹಾಯುವಾಗ ದೇವರ ಉತ್ಸವಮೂರ್ತಿ ಸಮೇತ ಭಕ್ತರು ಕೆಂಡದಲ್ಲಿ ಬಿದ್ದಿರುವ ಘಟನೆ ನಡೆದಿದೆ. ಮಾಡನಾಯಕನಹಳ್ಳಿ ಗ್ರಾಮದ ಕೊಲ್ಲಾಪುರದಮ್ಮ ದೇವಿ ಉತ್ಸವ ನಡೆಯುವ ವೇಳೆ ಈ ಅವಘಡ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಮಳೆ ಬಂದರೆ ಮನೆಗಳಲ್ಲೇ ಕೆಂಡ ಹಾಯುವ ಉಗ್ಗೇಹಳ್ಳಿ ಜನರು
ಚಿತ್ರದುರ್ಗ ತಾಲೂಕಿನ ಮಾಡನಾಯಕನಹಳ್ಳಿ ಈ ಘಟನೆ ನಡೆದಿದೆ. ಕೊಲ್ಲಾಪುರದಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಕೆಂಡ ಹಾಯುವ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಕೆಂಡ ಹಾಯುವಾಗ ದೇವರ ಮೂರ್ತಿಯೊಂದಿಗೆ ಮೂರ್ತಿ ಹೊತ್ತವರೂ ಬಿದ್ದಿದ್ದಾರೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳಾದ ಮೂರ್ತಿ, ಮಲ್ಲಿಕಾರ್ಜುನ, ಧನಂಜಯ ಎಂಬುವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Comments
English summary
3 people were injured in Kollapuradamma Festival which was held at Madanayakanahalli of Chitradurga district,