ಚಳ್ಳಕೆರೆ ಬಳಿ ಲಾರಿ ಬಸ್ ನಡುವೆ ಅಪಘಾತ; ಮೂವರ ಸಾವು
ಚಳ್ಳಕೆರೆ, ಅಕ್ಟೋಬರ್ 5: ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಳ್ಳಕೆರೆಯ ಸಾಣಿಕೆರೆ ಬಳಿ ನಡೆದಿದೆ.
ಗುಜರಾತ್ ನಲ್ಲಿ ಬಸ್ ಅಪಘಾತ; ಇಪತ್ತೊಂದು ಮಂದಿ ಸಾವು
ಇಂದು ಬೆಳಿಗ್ಗೆ ಸುಮಾರು 5.30ರ ಸುಮಾರಿಗೆ ಚಳ್ಳಕೆರೆ ತಾಲ್ಲೂಕು ಹೆಗ್ಗೆರೆ ಗೇಟ್ ಬಳಿ ಹಿರಿಯೂರಿನಿಂದ ಚಳ್ಳಕೆರೆ ಕಡೆಗೆ ಸಾಗುತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಸ್ ಚಾಲಕ ಪ್ರವೀಣ್ ಕುಮಾರ್, ಬೆಂಗಳೂರಿನ ವಿಜಯ್ ಕುಮಾರ್ ಹಾಗೂ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Comments
English summary
Three persons died on the spot in a road accident near Sanekere of Challakere.