ಚಿತ್ರದುರ್ಗ: ಬೆಂಗಳೂರಿಗೆ ಹೋಗಿ ಕೊರೊನಾ ವೈರಸ್ ತಂದ ಮಹಿಳೆ
ಚಿತ್ರದುರ್ಗ, ಜೂನ್ 21: ಕೊರೊನಾ ವೈರಸ್ ನಿಂದ ಮುಕ್ತವಾಗಿದ್ದ ಕೋಟೆ ನಾಡು ಚಿತ್ರದುರ್ಗದಲ್ಲಿ ಮತ್ತೆ ಒಂದು ಕೊರೊನಾ ವೈರಸ್ ಪಾಸಿಟಿವ್ ಕೇಸ್ ಪತ್ತೆಯಾಗಿದೆ.
Recommended Video
ಮಹಿಳೆಯೊಬ್ಬರು ಆರೋಗ್ಯ ಚಿಕಿತ್ಸೆಗೆಂದು ಬೆಂಗಳೂರಿಗೆ ಹೋಗಿ ತನ್ನ ಅಣ್ಣನ ಮನೆಯಲ್ಲಿ ಉಳಿದುಕೊಂಡು ಹಿರಿಯೂರಿಗೆ ವಾಪಸ್ ಆಗಿದ್ದರು. 29 ವರ್ಷದ ಹಿರಿಯೂರಿನ ಅಜಾದ್ ನಗರ ನಿವಾಸಿ ಮಹಿಳೆಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಗುಡ್ ನ್ಯೂಸ್: ಚಿತ್ರದುರ್ಗ ಈಗ ಕೊರೊನಾ ಸೋಂಕು ಮುಕ್ತ ಜಿಲ್ಲೆ
ಜೂನ್ 13 ರಂದು ಮಹಿಳೆಯು ಚಿಕಿತ್ಸೆಗೆಂದು ಬೆಂಗಳೂರಿಗೆ ಹೋಗಿದ್ದು, ಚಿಕಿತ್ಸೆಯ ನಂತರ ಐದಾರು ದಿನಗಳ ಕಾಲ ತನ್ನ ಅಣ್ಣನ ಮನೆಯಲ್ಲಿ ಉಳಿದಿದ್ದರು. ನಂತರ ಇದೇ ತಿಂಗಳ 18 ರಂದು ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಬೆಳಿಗ್ಗೆ 9.30 ಕ್ಕೆ ನಗರದ ಬಸ್ ನಿಲ್ದಾಣಕ್ಕೆ ಬಂದಿದ್ದರು.
ಅದೇ ದಿನ ಸಂಜೆ ಅಜಾದ್ ನಗರದ ಖಾಸಗಿ ಕ್ಲಿನಿಕ್ ನಲ್ಲಿ ಮಹಿಳೆ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ವಿಷಯ ತಿಳಿದ ಆರೋಗ್ಯಾಧಿಕಾರಿಗಳು ಆಕೆಯನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಆಕೆಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಆಗಿ ದೃಢಪಟ್ಟಿದೆ.
ಮಹಿಳೆಗೆ ಇತರೆ ಆರೋಗ್ಯದ ಸಮಸ್ಯೆಗಳು ಇರುವುದರಿಂದ ಚಿತ್ರದುರ್ಗ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಸಂಪರ್ಕದಲ್ಲಿ 10 ಜನರು ಇದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿಗೆ ಹೋಗಿ ಹಿರಿಯೂರಿಗೆ ವಾಪಸ್ಸಾಗಿದ್ದ 29 ವರ್ಷದ ಮಹಿಳೆಗೆ ಕೊರೊನಾ ವೈರಸ್ ಕೇಸ್ ಪತ್ತೆಯಾಗಿದ್ದು, ಇದೀಗ ಮಗನಿಗೂ ಸಹ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಮಹಿಳೆಯನ್ನು
ಚಿತ್ರದುರ್ಗ
ಕೋವಿಡ್
ಆಸ್ಪತ್ರೆಗೆ
ದಾಖಲಿಸಲಾಗಿತ್ತು.
ಪತಿ
ಹಾಗೂ
ಮಗನನ್ನು
ಧರ್ಮಪುರ
ಆಸ್ಪತ್ರೆಗೆ
ದಾಖಲಿಸಲಾದೆ.
ಈಗ
ಮಗನಿಗೂ
ಕೊರೊನಾ
ವೈರಸ್
ಪಾಸಿಟಿವ್
ಧೃಡಪಟ್ಟ
ಹಿನ್ನೆಲೆಯಲ್ಲಿ
ತಾಯಿ
ಇರುವ
ಕೋವಿಡ್
ಆಸ್ಪತ್ರೆಗೆ
ದಾಖಲಿಸಲಾಗಿದೆ.
ಸೋಂಕಿತರ
ಮನೆಯ
ರಸ್ತೆಯನ್ನು
ಸೀಲ್
ಡೌನ್
ಮಾಡಲಾಗಿದೆ.