ಕಾಡಾನೆ ದಾಳಿಯಲ್ಲಿ ಮೂಡಿಗೆರೆ ಮಹಿಳೆ ಸಾವು
ಚಿಕ್ಕಮಗಳೂರು, ಜುಲೈ 30: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಗುತ್ತಿ ಗ್ರಾಮದಲ್ಲಿ ನಡೆದಿದೆ.
ಕುದುರೆಮುಖ ಗೇಟ್ ಬಳಿ ರಾತ್ರೋರಾತ್ರಿ ಪ್ರತ್ಯಕ್ಷವಾಯ್ತು ಆನೆ
ಜಯಾ (32) ಸಾವನ್ನಪ್ಪಿರುವ ಮಹಿಳೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಹಠಾತ್ತನೆ ಕಾಡಾನೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಜಯಾ ಅವರ ಪಕ್ಕೆಲುಬು, ಹೊಟ್ಟೆಯ ಭಾಗಕ್ಕೆ ತ್ರೀವ್ರ ಹಾನಿಯಾಗಿತ್ತು.
ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆ ಮಾರ್ಗ ಮಧ್ಯೆ ಜಯಾ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
Comments
English summary
A woman who was seriously injured by elephant attack while working in a plantation in Chikkamagalur Moodigere Taluk is died. Jaya (32) is a woman who died in attack.
Story first published: Tuesday, July 30, 2019, 15:58 [IST]