ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಚಿಕ್ಕಮಗಳೂರು ನಗರಕ್ಕೆ ನುಗ್ಗಿದ ಒಂಟಿ ಸಲಗ

|
Google Oneindia Kannada News

ಚಿಕ್ಕಮಗಳೂರು, ಜುಲೈ 12; ಸೋಮವಾರ ಬೆಳಗ್ಗೆ ಚಿಕ್ಕಮಗಳೂರಿನ ಜನರು ಬೆಚ್ಚಿಬಿದ್ದರು. ಕೆಲವು ದಿನದಿಂದ ನಗರದ ಹೊರವಲಯದಲ್ಲಿ ಓಡಾಡುತ್ತಿದ್ದ ಒಂಟಿ ಸಲಗವನ್ನು ಇಂದು ಬೆಳಗ್ಗೆ ನಗರಕ್ಕೆ ಬಂದಿತ್ತು.

ಸೋಮವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಒಂಟಿ ಸಲಗ ಜಯನಗರ ಬಡಾವಣೆ ಮೂಲಕ ಮೂಡಿಗೆರೆ ರಸ್ತೆಗೆ ಬಂದಿತು. ಕಾಫಿಡೇಗೆ ಸೇರಿದ ಎಬಿಸಿ ಕಾಫಿ ಕಂಪನಿ ಗೇಟು ತಳ್ಳಿಕೊಂಡು ಆವರಣಕ್ಕೆ ನುಗ್ಗಿತು.

ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ! ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ!

ಸುಮಾರು 10 ನಿಮಿಷ ಎಬಿಸಿ ಕಾಫಿ ಕಂಪನಿ ಕಾಪೌಂಡ್‌ನಲ್ಲಿ ಓಡಾಡಿತು. ಬಳಿಕ ಹಿಂಭಾಗದಲ್ಲಿರುವ ಬಿದಿರು ಮಳೆಗಳ ನಡುವೆ ಹೋಯಿತು. ಗದ್ದೆಗಳ ಮೂಲಕ ನೆಲ್ಲೂರು ಕಡೆ ಸಂಚಾರ ನಡೆಸಿತು.

ಆನೆ ಹಾವಳಿ ತಡೆಗೆ ಜೇನು ಸಾಕಣೆ; ದೇಶದಲ್ಲೇ ಮೊದಲ ಪ್ರಯೋಗ ಆನೆ ಹಾವಳಿ ತಡೆಗೆ ಜೇನು ಸಾಕಣೆ; ದೇಶದಲ್ಲೇ ಮೊದಲ ಪ್ರಯೋಗ

Video Elephant Entered ABC Coffee Curing Area

ನಗರದಲ್ಲಿ ಆನೆ ನೋಡಿದ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆನೆ ನಗರಕ್ಕೆ ಬಂದರೂ ಯಾರಿಗೂ ಅಪಾಯ ಮಾಡಿಲ್ಲ. ಜನರ ಕೂಗಾಟ, ವಾಹನಗಳ ಓಡಾಟ ಕಂಡು ಅದು ಸಹ ಕ್ಷಣಕಾಲ ಗಾಬರಿಗೊಂಡಿತು.

ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ

ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆನೆಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಆನೆ ನಗರಕ್ಕೆ ಮತ್ತೆ ವಾಪಸ್ ಬಂದರೆ ಎಂಬ ಆತಂಕವೂ ಇತ್ತು. ಆದ್ದರಿಂದ ಎಚ್ಚರಿಕೆಯಿಂದ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಕಳೆದ ಎರಡು ದಿನಗಳ ಹಿಂದೆ ನಗರದ ಹೊರವಲಯದ ನೆಲ್ಲೂರು, ವಸ್ತಾರೆ, ಮೂಗ್ತಿಹಳ್ಳಿ ಭಾಗದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿತ್ತು. ಹೊರವಲಯದಲ್ಲಿದ್ದ ಆನೆ ಸೋಮವಾರ ನಗರಕ್ಕೆ ಪ್ರವೇಶ ಮಾಡಿದ್ದು ಆತಂಕಕ್ಕೆ ಕಾರಣವಾಗಿತ್ತು.

ಆನೆ ಸಂಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Recommended Video

ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ ತಂಡ ! | Oneindia Kannada

English summary
An elephant entered Chikmagaluru city ABC coffee curing area on Monday morning. It was sent back to the forest by forest department officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X