ಚಾರ್ಮಾಡಿ ಘಾಟ್ ಮಧ್ಯೆ ವಾಹನ ನಿಲ್ಲಿಸಿದರೆ ಕೇಸ್
ಚಿಕ್ಕಮಗಳೂರು, ಜುಲೈ 4: ಮಳೆಯ ನಡುವೆ ಘಾಟ್ ನಲ್ಲಿ ವಾಹನ ನಿಲ್ಲಿಸಿ ಅಪಾಯಕಾರಿ ಜಾಗಗಳಲ್ಲಿ ಜನರು ಓಡಾಡುತ್ತಿರುವುದು ಹೆಚ್ಚಾಗಿರುವ ಕಾರಣ ಮೂಡಿಗೆರೆಯ ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆಯನ್ನು ನಿಷೇಧಗೊಳಿಸಲಾಗಿದೆ.
Recommended Video
Corona
Updates
:
ಒಂದೇ
ದಿನದಲ್ಲಿ
22
ಸಾವಿರಕ್ಕೂ
ಅಧಿಕ
ಪ್ರಕರಣ
|
Oneindia
Kannada
ಇನ್ನು ಮುಂದೆ ಚಾರ್ಮಾಡಿಯಲ್ಲಿ ವಾಹನ ನಿಲ್ಲಿಸಿದರೆ ಕೇಸ್ ದಾಖಲಿಸಿಕೊಳ್ಳಲಾಗುತ್ತದೆ. ಚಾರ್ಮಾಡಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿರುವ ಕುರಿತು ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಮಾಹಿತಿಯ ನ್ನುನೀಡುತ್ತಿದ್ದಾರೆ. ಈ ಕುರಿತು ಚೆಕ್ ಪೋಸ್ಟ್ ನಲ್ಲಿ ಮಾಹಿತಿ ಫಲಕವನ್ನೂ ಜಿಲ್ಲಾಡಳಿತ ಅಳವಡಿಸಿದೆ.
ಖಂಡಾಲ ಘಾಟ್ ರಸ್ತೆಯಂತೆ ಚಾರ್ಮಾಡಿ ಘಾಟ್ ರಸ್ತೆ ಅಭಿವೃದ್ಧಿ
ಇದೀಗ ಚಿಕ್ಕಮಗಳೂರಿನಲ್ಲಿ ಮಳೆಯಾಗುತ್ತಿದ್ದು, ಮಳೆ ಸುರಿಯುವ ಸಮಯ, ಘಾಟ್ ನಲ್ಲಿ ಪ್ರಯಾಣಿಸುವವರು ವಾಹನ ನಿಲ್ಲಿಸಿ ಅಪಾಯಕಾರಿ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಕಳೆದ ವರ್ಷವೂ ಬಂಡೆಗಲ್ಲಿನ ಮೇಲೆ ಸೆಲ್ಫೀ ತೆಗೆದುಕೊಳ್ಳಲು ಹೋದ ಯುವಕನೊಬ್ಬ ಜಾರಿ ಬಿದ್ದಿದ್ದ. ಇಂಥ ಘಟನೆಗಳು ಜರುಗುವುದನ್ನು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ಘಾಟ್ ನಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿದೆ.
Comments
English summary
People travelling through charmadi ghat park their vehicles and walk around dangerous places. So District administration has prohibited vehicle parking at charmadi ghat,
Story first published: Saturday, July 4, 2020, 17:07 [IST]