ಬೀರೂರು ಮತ್ತು ಅರಸೀಕೆರೆಯಲ್ಲಿ ಹಲವು ರೈಲುಗಳ ನಿಲುಗಡೆ
ಚಿಕ್ಕಮಗಳೂರು, ಜನವರಿ 03 : ತಿಪಟೂರು, ಬೀರೂರು ಮತ್ತು ಅರಸೀಕೆರೆಯಲ್ಲಿ ಹಲವು ರೈಲುಗಳ ನಿಲುಗಡೆಗೆ ಆದೇಶ ನೀಡಲಾಗಿದೆ. ನೈಋತ್ಯ ರೈಲ್ವೆ ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಿದೆ.
ರೈಲ್ವೆ ಖಾತೆ ರಾಜ್ಯ ಸಚಿವ ಮತ್ತು ಬೆಳಗಾವಿಯ ಬಿಜೆಪಿ ಸಂಸದ ಸುರೇಶ್ ಅಂಗಡಿ ಗುರುವಾರ ಹುಬ್ಬಳ್ಳಿಯಿಂದ ತುಮಕೂರು ತನಕ ರೈಲ್ವೆ ಮಾರ್ಗದ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದರು.
ದೇಶದಲ್ಲಿ ಓಡಾಡಲಿದೆ ಖಾಸಗಿ ರೈಲು: ಎಲ್ಲೆಲ್ಲಿ ಇರಲಿದೆ ಸಂಚಾರ?
ಸಚಿವರು ರೈಲು ಸಂಖ್ಯೆ 12089/90 ಯಶವಂತಪುರ- ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್ಪ್ರೆಸ್ ರೈಲನ್ನು ಬೀರೂರು ಮತ್ತು ಅರಸೀಕೆರೆಯಲ್ಲಿ ನಿಲ್ಲಿಸಲು ಸೂಚನೆ ನೀಡಿದರು. ಜನವರಿ 3 ರಿಂದ ಜುಲೈ 2, 2020 ತನಕ ನಿಲ್ಲಿಸಲು ನಿರ್ದೇಶನ ನೀಡಿದರು.
ರೈಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದ ಐಆರ್ಸಿಟಿಸಿ
ಮೈಸೂರು-ಸೋಲಾಪುರ ಗೋಲ್ ಗುಂಬಜ್ ರೈಲನ್ನು ತಿಪಟೂರಿನಲ್ಲಿ ನಿಲ್ಲಿಸಲು ಸೂಚನೆ ನೀಡಲಾಗಿದೆ. ಜನವರಿ 3ರಿಂದ ಜುಲೈ 2, 2020ರ ತನಕ ರೈಲುಗಳನ್ನು ನಿಲ್ಲಿಸಲಾಗುತ್ತದೆ.
ಕೋಲಾರ - ವೈಟ್ ಫೀಲ್ಡ್ ಡೆಮು ವಿಶೇಷ ರೈಲು ಆರಂಭ
ಯಶವಂತಪುರ-ಪಂಢರಪುರ-ಯಶವಂತಪುರ ರೈಲು ಸಂಖ್ಯೆ 16541/42 ಎಕ್ಸ್ಪ್ರೆಸ್ ರೈಲನ್ನು ಬೀರೂರಿನಲ್ಲಿ ನಿಲ್ಲಿಸಲು ಸೂಚನೆ ನೀಡಲಾಗಿದೆ. ಜನವರಿ 3ರಿಂದ ರೈಲುಗಳು ನಿಲುಗಡೆಗೊಳ್ಳಲಿವೆ.