ಲಾಕ್ ಡೌನ್ ಇದ್ದರೂ ಚಿಕ್ಕಮಗಳೂರು ರೆಸಾರ್ಟ್ ನತ್ತ ಪ್ರವಾಸಿಗರು
ಚಿಕ್ಕಮಗಳೂರು, ಮಾರ್ಚ್ 31: ಕೊರೊನಾ ವೈರಸ್ ತಡೆಗಟ್ಟಲು ಇಡೀ ದೇಶವೇ ಲಾಕ್ ಡೌನ್ ಆಗಿದ್ದರೂ ಚಿಕ್ಕಮಗಳೂರು ಜಿಲ್ಲೆಯ ಖಾಸಗಿ ರೆಸಾರ್ಟ್ ಗಳಿಗೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ.
Recommended Video
Karnataka
Bandh
should
be
done
three
weeks,
says
UT
Khadar
|
Oneindia
kannada
ಬೆಂಗಳೂರಿನಿಂದ ಚಿಕ್ಕಮಗಳೂರಿನ ರೆಸಾರ್ಟ್ ಗಳಿಗೆ ಪ್ರವಾಸಿಗರು ಬರುತ್ತಿರುವುದು ಕಂಡುಬಂದಿದೆ. ರೆಸಾರ್ಟ್, ಹೋಂ ಸ್ಟೇಗಳಿಗೆ ಬೆಂಗಳೂರಿನ ಹೈ-ಫೈ ಕಾರುಗಳು ಬರುತ್ತಿವೆ.
ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನಾ ಇದೆಯಾ? ಎಂದು ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸುತ್ತಮುತ್ತಲಿನ ರೆಸಾರ್ಟ್ ಗಳಲ್ಲಿ ಕೆಎ 01 ಹಾಗೂ ಕೆಎ 02 ನೋಂದಣಿ ಇರುವ ವಾಹನಗಳ ಓಡಾಡುತ್ತಿವೆ. ಕಾರುಗಳು ರೆಸಾರ್ಟ್ ವಾಸ್ತವ್ಯಕ್ಕೆ ಬರುತ್ತಿವೆಯಾ ಎಂಬ ಅನುಮಾನ ಮೂಡಿದೆ.
Comments
English summary
Tourist Arrival In Chikkamagaluru Resorts Despite The Lockdown