ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ತೆರೆಮರೆಯಲ್ಲಿ ಸಿಟಿ ರವಿ ವಿರೋಧ
ಚಿಕ್ಕಮಗಳೂರು, ಮಾರ್ಚ್ 15: ಲೋಕಸಭೆ ಚುನಾವಣೆ ಬೆನ್ನಲ್ಲೇ ಚಿಕ್ಕಮಗಳೂರಿನ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧೆಗೆ ತೆರೆಮರೆಯಲ್ಲಿ ಸಿಟಿ ರವಿ ವಿರೋಧ ವ್ಯಕ್ತಪಡಿಸಿದ್ದಾರೆ.
ಸಿಟಿ ರವಿ ಅವರ ಆಪ್ತರಾದ ನಗರಸಭಾ ಸದಸ್ಯರು ಹಾಗೂ ಬಿಜೆಪಿ ಮುಖಂಡರುಗಳಿಂದ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. "ಬಸ್ ಚಾರ್ಜ್ ಹಾಕಿಕೊಂಡು ಬೆಂಗಳೂರಿಗೆ ಹೋಗಿ ಸಂಸದರನ್ನ ಹುಡುಕಲು ನಮ್ಮಿಂದ ಸಾಧ್ಯವಿಲ್ಲ. ಇದುವರೆಗೂ ಯಾವುದೇ ಸಭೆಗಳಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಭಾಗಿಯಾಗಿಲ್ಲ" ಎಂದು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.
ಮೋದಿ ವಿಶ್ವವಿದ್ಯಾಲಯದಲ್ಲಿ ಶೋಭಾ ಕರಂದ್ಲಾಜೆ ಫೇಲ್!
ಈ
ಕ್ಷೇತ್ರಕ್ಕೆ
ಶೋಭಾ
ಕರಂದ್ಲಾಜೆ
ಅವಶ್ಯಕತೆ
ಇಲ್ಲ
ಎಂದು
ಜನ
ಹೇಳುತ್ತಿದ್ದಾರೆ.
ಸ್ಥಳೀಯರನ್ನು
ಅಭ್ಯರ್ಥಿಯನ್ನಾಗಿ
ಮಾಡುವಂತೆ
ಬಿಜೆಪಿ
ಮುಖಂಡರ
ಜೊತೆಗೆ
ಚರ್ಚೆ
ಮಾಡುತ್ತೇವೆ.
ಎಂದು
ಚಿಕ್ಕಮಗಳೂರು
ನಗರ
ಬಿಜೆಪಿ
ಮುಖಂಡರು
ಪತ್ರಿಕಾ
ಗೋಷ್ಠಿಯಲ್ಲಿ
ಇಂದು
ಶುಕ್ರವಾರ
ತಿಳಿಸಿದ್ದಾರೆ.
ಶೋಭಾ ಕರಂದ್ಲಾಜೆ ವಿರುದ್ಧ ಅಮಿತ್ ಶಾಗೆ ಟೆಕ್ಕಿಗಳ ಪತ್ರ!
ನಗರ ಸಭೆ ಅಧ್ಯಕ್ಷೆ ಶಿಲ್ಪ ರಾಜಶೇಖರ್ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆದಿದ್ದು, ನಗರಸಭೆ ಸದಸ್ಯರುಗಳು ಹಾಗೂ ಬಿಜೆಪಿ ಪ್ರಮುಖ ಮುಖಂಡರುಗಳ ಜೊತೆ ಕಳೆದ ಕೆಲ ದಿನಗಳ ಹಿಂದೆ ಜಯಪ್ರಕಾಶ್ ಹಗ್ಡೆ ಚರ್ಚೆ ನಡೆಸಿದ್ದರು ಎನ್ನಲಾಗಿದೆ.