ದೇವರಮನೆಯ ದೇವಸ್ಥಾನದಲ್ಲಿ ಹುಂಡಿ ಕಳ್ಳತನ
ಚಿಕ್ಕಮಗಳೂರು, ಜೂನ್ 27: ದೇವಸ್ಥಾನವೊಂದರಲ್ಲಿ ಹುಂಡಿಯನ್ನು ಕಳವು ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ದೇವರಮನೆಯಲ್ಲಿ ನಡೆದಿದೆ.
ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿದ ಚಿಕ್ಕಮಗಳೂರು ಪೊಲೀಸರು
ದೇವರಮನೆಯಲ್ಲಿರುವ ಶ್ರೀ ಕಾಲಭೈರವೇಶ್ವರನ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಬುಧವಾರ ತಡರಾತ್ರಿ ಹುಂಡಿಯನ್ನು ದೇವಸ್ಥಾನದಿಂದ ಕದ್ದೊಯ್ದಿರುವ ಕಳ್ಳರು, ಅದರೊಳಗಿದ್ದ ಹಣವನ್ನೆಲ್ಲ ತೆಗೆದುಕೊಂಡು, ನಂತರ ಕೋಗಿಲೆ ಗ್ರಾಮದ ಬಳಿ ಹುಂಡಿಯನ್ನು ಎಸೆದು ಪರಾರಿಯಾಗಿದ್ದಾರೆ. ಹುಂಡಿಯಲ್ಲಿ ಎಷ್ಟು ಹಣವಿರಬಹುದೆಂಬ ಮಾಹಿತಿ ಲಭ್ಯವಿಲ್ಲ.
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Comments
English summary
Thieves stolen the hundi in temple. The incident took place at the kalabhairaveshwara temple in Moodigere Taluk Chikkamagaluru.