ನರ್ಸ್ ವೇಶದಲ್ಲಿ ಬಂದು ಮಗು ಕದ್ದೊಯ್ದ ಮಹಿಳೆ
ಚಿಕ್ಕಮಗಳೂರು, ಡಿಸೆಂಬರ್ 05: ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಾಲ್ಕು ದಿನದ ಮಗು ಕಳುವಾಗಿದೆ. ನರ್ಸ್ ವೇಶದಲ್ಲಿ ಒಬ್ಬ ಮಹಿಳೆ ಬಂದು ಕದ್ದೊಯ್ದಿದ್ದಾಳೆ.
ನರ್ಸ್ ಎಂದು ಸುಳ್ಳು ಹೇಳಿ ಆಸ್ಸಾಂ ಮೂಲದ ಅಂಜಲಿ-ಸುನೀಲ್ ದಂಪತಿಗೆ ಯಾಮಾರಿಸಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ.
ಜನವರಿ 1 ರಂದು ದಾಖಲೆ ಬರೆದ ಭಾರತ: ಯಾವುದರಲ್ಲಿ ಗೊತ್ತಾ?
ಹೊಸ ವರ್ಷ ಆರಂಭದ ಜನವರಿ 1 ರಂದು ಮಗು ಜನಿಸಿತ್ತು. ನಾಲ್ಕು ದಿನದ ಹಸುಗೂಸನ್ನು ಕಳೆದುಕೊಂಡಿರುವ ಹೆತ್ತಮ್ಮ ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ರುವ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟುಹೋಗಿವೆ.
ಚುಚ್ಚುಮದ್ದು ತೆಗೆದುಕೊಂಡ ಸ್ವಲ್ಪ ಹೊತ್ತಿನಲ್ಲೇ ಸಾವನ್ನಪ್ಪಿದ ಕಂದಮ್ಮ
ಇಂತಹ ಘಟನೆಗಳು ಇತ್ತೀಚಿಗೆ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿವೆ. ಈ ಘಟನೆಗಳಿಗೆ ಯಾರು ಜವಾಬ್ದಾರಿಯನ್ನು ಹೊರುತ್ತಾರೆ. ಜಿಲ್ಲಾ ಕೇಂದ್ರಗಳಲ್ಲಿರುವ ಆಸ್ಪತ್ರೆಗೆ ಸರಿಯಾದ ಭದ್ರತೆ ಇಲ್ಲ ಎಂದರೆ ಏನರ್ಥ. ಕನಿಷ್ಟ ಪಕ್ಷ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸದ ಸ್ಥಿತಿ ಯಲ್ಲಿರುವುದು ದುರದುಷ್ಟಕರ.