ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟ ಸುದೀಪ್ ಮೇಲಿನ ಕೇಸ್ ಹಿಂಪಡೆಯುವಂತೆ ಧಮ್ಕಿ: ದೂರು ‌ದಾಖಲು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 17: ನಟ ಸುದೀಪ್ ಮೇಲಿನ ಕೇಸ್ ಹಿಂಪಡೆಯುವಂತೆ ನವೀನ್ ಎಂಬಾತ ದೀಪಕ್ ಮಯೂರ್ ಗೆ ಧಮ್ಕಿ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಸುದೀಪ್ ವಿರುದ್ಧ ಬಾಡಿಗೆ ಹಣ ನೀಡದ ಕುರಿತು ‌ಈ ಹಿಂದೆ ದೀಪಕ್ ಮಯೂರ್ ಕೇಸ್ ದಾಖಲು ಮಾಡಿದ್ದರಿಂದ ದೀಪಕ್ ಮಯೂರ ಪಟೇಲ್ ಗೆ ನವೀನ್ ಧಮ್ಕಿ ಹಾಕಿದ್ದಾರೆ. ಅಂದಹಾಗೆ ನವೀನ್ ಕಿಚ್ಚ ಸುದೀಪ್ ಅಭಿಮಾನಿಗಳ‌ ಸಂಘದ ರಾಜ್ಯಾಧ್ಯಕ್ಷ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು: ಕಿಚ್ಚ ಸುದೀಪ್ ವಿರುದ್ಧ ಕಾಫಿ ಎಸ್ಟೇಟ್ ಮಾಲೀಕರಿಂದ ದೂರುಚಿಕ್ಕಮಗಳೂರು: ಕಿಚ್ಚ ಸುದೀಪ್ ವಿರುದ್ಧ ಕಾಫಿ ಎಸ್ಟೇಟ್ ಮಾಲೀಕರಿಂದ ದೂರು

ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದಲ್ಲಿ ದೀಪಕ್ ‌ಮಯೂರ್ ಅವರ ಮನೆಯನ್ನು ಬಾಡಿಗೆ ಪಡೆದು‌ ಕಿಚ್ಚ ಸುದೀಪ್ ನಿರ್ಮಾಣದ 'ವಾರಸ್ದಾರ' ಧಾರಾವಾಹಿ ಚಿತ್ರೀಕರಣ ನಡೆಸಲಾಗುತ್ತಿತ್ತು.

Sudeep fans associations state president Naveen threatened

ಆದರೆ ಬಾಡಿಗೆ ಹಣವನ್ನು ನೀಡಲಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್ ವಿರುದ್ಧ ಮಲ್ಲಂದೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು‌ ದಾಖಲಾದ ‌ಹಿನ್ನೆಲೆ‌ಯಲ್ಲಿ ಕೇಸ್ ವಾಪಸ್ ಪಡೆಯುವಂತೆ ನವೀನ್ ‌ದೀಪಕ್ ಮಯೂರ್ ಗೆ ಧಮ್ಕಿ ಹಾಕಿದ್ದಾರೆ.

ಅಳಿಲಿನಷ್ಟು ತಪ್ಪು ಮಾಡಿದ್ದೇನೆ, ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ: ಸುದೀಪ್ಅಳಿಲಿನಷ್ಟು ತಪ್ಪು ಮಾಡಿದ್ದೇನೆ, ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ: ಸುದೀಪ್

ಇದೀಗ ಮಲ್ಲಂದೂರು ಪೊಲೀಸ್ ‌ಠಾಣೆಯಲ್ಲಿ ನವೀನ್ ವಿರುದ್ಧ ದೂರು ‌ದಾಖಲಾಗಿದ್ದು, ನಿನ್ನೆ ನವೀನ್ ನನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

English summary
Sudeep fans association's state president Naveen threatened to Deepak Mayur. On this reason case was registered at Mallandur police station against Naveen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X