ವೀಡಿಯೋ; ಶಾಲೆ ಬಿಟ್ಟು ಹೋಗದಂತೆ ಶಿಕ್ಷಕನ ತಬ್ಬಿ ಕಣ್ಣೀರಿಟ್ಟ ವಿದ್ಯಾರ್ಥಿಗಳು
Recommended Video
ಚಿಕ್ಕಮಗಳೂರು, ಸೆಪ್ಟೆಂಬರ್ 26: ಗುರು ಶಿಷ್ಯ ಸಂಬಂಧ ಪಠ್ಯ, ಶಾಲೆಗಷ್ಟೇ ಸೀಮಿತ ಎನಿಸುತ್ತಿರುವ ಕಾಲವಿದು. ಆದರೆ ಶಿಕ್ಷಕರೆಡೆಗೆ ಈ ಮಕ್ಕಳ ಪ್ರೀತಿಯನ್ನು ನೋಡಿದರೆ ಎಂಥವರಲ್ಲೂ ಅಚ್ಚರಿ ಮೂಡುತ್ತದೆ.
ಐವತ್ತು ರುಪಾಯಿ ಖರ್ಚಿನಲ್ಲೇ ಈ ಶಿಕ್ಷಕರು ಎಂಥ ಅದ್ಭುತ ಮಾಡಿದರು!
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತಣಿಗೆಬೈಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ನಾಗರಾಜಪ್ಪ ಅವರಿಗೆ ಇಲ್ಲಿಂದ ಲಿಂಗದಹಳ್ಳಿ ಶಾಲೆಗೆ ವರ್ಗಾವಣೆಯಾಗಿತ್ತು. ವರ್ಗಾವಣೆಯಾಗಿ ಬೇರೆಡೆಗೆ ಹೋಗುತ್ತಿದ್ದ ಶಿಕ್ಷಕರನ್ನು ಕಳುಹಿಸಿಕೊಡಲು ಮನಸ್ಸಿಲ್ಲದೇ ಮಕ್ಕಳು ಕಣ್ಣೀರಿಟ್ಟಿದ್ದಾರೆ.
ಅನೇಕ ವರ್ಷಗಳಿಂದ ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರಾದ ನಾಗರಾಜಪ್ಪ ಅವರನ್ನು ಕಂಡರೆ ಇಲ್ಲಿನ ಮಕ್ಕಳಿಗೆ ಅಚ್ಚುಮೆಚ್ಚು. ಪಾಠದಲ್ಲಾಗಲಿ, ಆಟದಲ್ಲಾಗಲಿ ಮಕ್ಕಳಿಗೆ ಉತ್ಸಾಹದ ಚಿಲುಮೆಯಾಗಿದ್ದರು. ಈ ಶಿಕ್ಷಕರು ಇಂದು ತಮ್ಮ ಶಾಲೆಯಿಂದ ಬೇರೆಡೆಗೆ ಹೋಗುತ್ತಿದ್ದಾರೆ ಎಂದು ಮಕ್ಕಳು ದುಃಖದಿಂದ ಕಣ್ಣೀರಿಟ್ಟರು. ಶಿಕ್ಷಕರಿಗೆ ತಮ್ಮ ಶಾಲೆಯನ್ನು ಬಿಟ್ಟು ಹೋಗದಂತೆ ತಬ್ಬಿಕೊಂಡು ಅತ್ತರು.
ಸಾವಿರಾರು ಮಕ್ಕಳ ಬದುಕು ಕಟ್ಟಿಕೊಟ್ಟ 'ಸಂತ ಶಿಕ್ಷಕ' ಬಿಜಿ ಅಣ್ಣಿಗೇರಿ ಇನ್ನಿಲ್ಲ
ಈ ಪುಟ್ಟ ಮಕ್ಕಳು ಶಿಕ್ಷಕರನ್ಬು ತಬ್ಬಿಕೊಂಡು ಗೋಳಿಡುತ್ತಿರುವುದನ್ನು ಕಂಡ ಎಲ್ಲರಲ್ಲೂ ಕಣ್ಣೀರು ಜಿನುಗಿತ್ತು.