ಶೃಂಗೇರಿ: ಶಂಕರಾಚಾರ್ಯರರ ಪುತ್ಥಳಿ ಮೇಲೆ ಎಸ್.ಡಿ.ಪಿ.ಐ ಸಂಘಟನೆ ಬಾವುಟ, ಪ್ರತಿಭಟನೆ
ಚಿಕ್ಕಮಗಳೂರು, ಆಗಸ್ಟ್ 13: ಬೆಂಗಳೂರಿನ ಕೆ.ಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಘಟನೆ ಇನ್ನು ಹಸಿಯಾಗಿರುವಾಗಲೇ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಶಂಕರಚಾರ್ಯರ ಪುತ್ಥಳಿ ಮೇಲೆಯೇ ಎಸ್.ಡಿ.ಪಿ.ಐ ಸಂಘಟನೆಯ ಬಾವುಟ ಹಾರಿಸುವ ಮೂಲಕ ಕೋಮು ಸೌಹಾರ್ದತೆ ಕದಡುವ ಪ್ರಯತ್ನ ಮಾಡಲಾಗಿದೆ.
Recommended Video
ಕಳೆದ ರಾತ್ರಿ ಶೃಂಗೇರಿ ಪಟ್ಟಣದ ಶಂಕರಾಚಾರ್ಯರ ವೃತ್ತದಲ್ಲಿರುವ ಪುತ್ಥಳಿಯ ಮೇಲೆ ಬಾವುಟ ಹಾರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಮಾಜಿ ಸಚಿವ ಡಿ.ಎನ್ ಜೀವರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮಠದ ಭಕ್ತರು ಕೂಡಲೇ ಸಂಬಂಧಿತ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಹಿಂಸಾಚಾರ: ಶೋಭಾ ಕರಂದ್ಲಾಜೆ ಮಾಡಿದ ಗಂಭೀರ ಆರೋಪ
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೃಂಗೇರಿ ಮಾಜಿ ಶಾಸಕ ಜೀವರಾಜ್, ಶಂಕರಾಚಾರ್ಯರ ಪುತ್ಥಳಿ ಮೇಲೆ ಮುಸ್ಲಿಂ ಬಾವುಟ ಹಾರಿಸಿದ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಈ ಕೃತ್ಯದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ತಾಲ್ಲೂಕು ಪಟ್ಟಣ ಪಂಚಾಯತಿ ಸದಸ್ಯರಾಗಿರುವ ರಫೀಕ್ ಹಾಗೂ ಎಸ್.ಡಿ.ಪಿ.ಐ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ ಎಂದು ದೂರಿದರು. ಇದಕ್ಕೆ ಸಂಬಂಧಿದಂತೆ ರಫೀಕ್ ಸೇರಿದಂತೆ ನಾಲ್ಕು ಜನರನ್ನು ಬಂಧಿಸಿದ್ದು, ರಫೀಕ್ ಪಟ್ಟಣ ಪಂಚಾಯತ್ ಸದಸ್ಯತ್ವ ಸ್ಥಾನವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.