ಶೃಂಗೇರಿ-ಕುದುರೆಮುಖ-ಮಂಗಳೂರು ಸಂಚಾರ ಸ್ಥಗಿತ
ಚಿಕ್ಕಮಗಳೂರು, ಆಗಸ್ಟ್ 10: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಸ್ವಲ್ಪ ತಗ್ಗಿದಂತಿದೆ. ಆದರೆ ಮಳೆಯಿಂದಾದ ಅವಾಂತರ ಮಾತ್ರ ಇನ್ನೂ ನಿಂತಿಲ್ಲ. ವಾರದಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಗುಡ್ಡದ ಮಣ್ಣು ಕೊಚ್ಚೆಯಂತೆ ಹರಿಯಲು ಆರಂಭಿಸಿದೆ.
Recommended Video
ಶ್ರೀಲಂಕಾದಲ್ಲಿ
ಮತ್ತೆ
ಅಧಿಕಾರದ
ಚುಕ್ಕಾಣಿ
ಹಿಡಿದ
ರಾಜಪಕ್ಸೆ
|
Oneindia
Kannada
ಶೃಂಗೇರಿ ತಾಲೂಕಿನ ನೆಮ್ಮಾರ್ ಬಳಿ ರಸ್ತೆ ಬದಿಗಳಲ್ಲಿ ಮಣ್ಣು ತುಂಬಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಸ್ತೆ ಸಂಚಾರ ಬಂದ್ ಆಗಿದೆ. ಮಳೆಯಿಂದಾಗಿ ಅಬ್ಬಗೂಡಿಗೆ ಕಿರುಸೇತುವೆ ಕೊಚ್ಚಿಹೋಗಿದ್ದು, ನೀರು ಉಕ್ಕಿ ಹರಿದಿದೆ. ನಂತರ ನೀರಿನ ಹರಿವು ಕಡಿಮೆಯಾದರೂ ಮಣ್ಣು ತುಂಬಿಕೊಂಡು ಹರಿಯುತ್ತಿದೆ.
ಚಾರ್ಮಾಡಿ ಘಾಟ್ ನಲ್ಲಿ ಬಿರುಕು ಬಿಟ್ಟ ರಸ್ತೆ; ಸಂಚಾರ ಬಂದ್
ಹೀಗಾಗಿ ಶೃಂಗೇರಿ-ಕುದುರೆಮುಖ-ಮಂಗಳೂರು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮಳೆ ನೀರು ತುಂಬಿಕೊಂಡ ಪರಿಣಾಮ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಬ್ಬಗೂಡಿಗೆ-ಕಲ್ಗೋಡು ಗ್ರಾಮಗಳ ಸಂಪರ್ಕವೂ ಸ್ಥಗಿತವಾಗಿದೆ.
Comments
English summary
The routes of sringeri kuduremukh mangaluru closed due to heaby rain