ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣ ನೀಡಲಿಲ್ಲ ಎಂದು ತಾಯಿಯನ್ನೇ ಕೊಂದು ರಸ್ತೆಗೆ ಎಸೆದ ಮಗ

|
Google Oneindia Kannada News

ಚಿಕ್ಕಮಗಳೂರು, ಜನವರಿ 17: ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿ ರಸ್ತೆಗೆ ಎಸೆದಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

ಶಿವನಸಮುದ್ರದಲ್ಲಿ ನವದಂಪತಿ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ ಶಿವನಸಮುದ್ರದಲ್ಲಿ ನವದಂಪತಿ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ

ಆಗಲೇ ಕುಡಿದುಬಂದಿದ್ದ ಗಣೇಶ್ ಇನ್ನೂ ಕುಡಿಯಲು ಹಣಬೇಕು ಎಂದು ತಾಯಿಯನ್ನು ಪೀಡಿಸಿದ್ದಾರೆ, ಅದಕ್ಕೆ ಒಪ್ಪದ ತಾಯಿಗೆ ದೊಡ್ಡಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಗಣೇಶ್ ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ತಾಯಿಯೇ ದುಡಿದು ಆತನನ್ನು ಸಲಹುತ್ತಿದ್ದಳು. ವೃದ್ಧೆ ಮೀನಾಕ್ಷಿ ಮೃತ ದುರ್ದೈವಿ.

ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್ ರಕ್ತದ ಮಡುವಿನಲ್ಲಿದ್ದರೂ ಹೆಂಡತಿಗೆ ಕರೆ ಮಾಡಿ ನನ್ನನ್ನು ಬದುಕಿಸು ಎಂದಿದ್ದ ಸೈಯದ್

ಗಣೇಶ್ ತಾಯಿ ಮೀನಾಕ್ಷಿಗೆ ಸರ್ಕಾರದಿಂದ 1.5 ಸಾವಿರ ರೂ ಪಿಂಚಣಿ ಹಣ ಬಂದಿತ್ತು, ಅದನ್ನು ಕೊಡು ಎಂದು ತಾಯಿಯನ್ನು ಪೀಡಿಸುತ್ತಿದ್ದ, ಈ ವಿಚಾರವಾಗಿ ಜಗಳವೂ ಕೂಡ ನಡೆದಿತ್ತು. ಆದರೆ ಜಗಳ ತಾರಕ್ಕೆ ಹೋಗಿ ಕೊನೆಗೆ ಕೋಪದಲ್ಲಿ ತಾಯಿಗೆ ಹೊಡೆದಿದ್ದಾನೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Son kills his mother for Money

ಬಳಿಕ ತಾಯಿಯನ್ನು ತಂದು ಬೀದಿಯಲ್ಲಿ ಎಸೆದಿದ್ದಾನೆ. ಬೆಳಗ್ಗೆ ಗ್ರಾಮಸ್ಥರು ಶವವನ್ನು ಗಮನಿಸಿದ್ದಾರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಗಣೇಶ್ ನಡವಳಿಕೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ ಬಳಿಕ ಆತನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

English summary
Son killed his mother for not given money to drink alchohol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X