ಜೆಡಿಎಸ್ ಸಭೆಯಲ್ಲಿ ಕಣ್ಣೀರಿಟ್ಟ ವಿಧಾನಪರಿಷತ್ ಉಪ ಸಭಾಪತಿ ಧರ್ಮೇಗೌಡ
ಚಿಕ್ಕಮಗಳೂರು, ಫೆಬ್ರವರಿ 28: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ ಎದುರೇ ವಿಧಾನಪರಿಷತ್ ಉಪ ಸಭಾಪತಿ ಧರ್ಮೇಗೌಡ ಕಣ್ಣೀರು ಹಾಕಿ ಭಾವುಕರಾದ ಘಟನೆ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಇಂದು ಗುರುವಾರ ಕಡೂರಿನಲ್ಲಿ ನಡೆದಿದೆ.
ನಾನು ಚುನಾವಣೆ ಎದುರಿಸುವುದು ಮಂಡ್ಯದಿಂದ ಮಾತ್ರ: ಸುಮಲತಾ
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಧರ್ಮೇಗೌಡ, ತಮ್ಮ ಕುಟುಂಬಕ್ಕೆ ರಾಜಕೀಯ ಜನ್ಮ ನೀಡಿದವರು ದೇವೇಗೌಡರು. ನಾವು ರಾಜಕೀಯವಾಗಿ ನೆಲಕಚ್ಚಿದ ವೇಳೆ ನಮಗೆ ಅನ್ನ ನೀಡಿದವರು ದೇವೇಗೌಡರು ಎಂದು ಕಣ್ಣೀರು ಹಾಕಿದರು. ಆಗ ವೇದಿಕೆಯಲ್ಲಿದ್ದ ವೈಎಸ್ ವಿ ದತ್ತ, ಧರ್ಮೇಗೌಡರ ಕಣ್ಣೀರು ಒರೆಸಿದ್ದಾರೆ.
ಸಂಪುಟ ವಿಸ್ತರಣೆ : ಮಾರ್ಚ್ ಮೊದಲ ವಾರದಲ್ಲೇ ಜೆಡಿಎಸ್ ನ 2 ಸ್ಥಾನ ಭರ್ತಿ
ಸಭೆಯಲ್ಲಿ ದೇವೇಗೌಡರು, ಮುಂದಿನ ಚುನಾವಣೆಗೆ ದತ್ತಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ರೇವಣ್ಣ, ಪ್ರಜ್ವಲ್ ರೇವಣ್ಣ ಹಾಜರಿದ್ದರು.
Comments
English summary
S.L.Dharmegowda praised HD Deve Gowda in JDS activists meeting at Kaduru. Former Prime Minister Deve Gowda, Revanna, Prajwal Revanna were present at this stage.
Story first published: Thursday, February 28, 2019, 18:55 [IST]