ಕೊಟ್ಟಿಗೆ ಹಾರ ತಲುಪಿದ ಸಿದ್ಧಾರ್ಥ್ ಪಾರ್ಥಿವ ಶರೀರ; ಅಗಲಿದ ಜೀವಕ್ಕೆ ಪುಷ್ಪ ನಮನ
ಚಿಕ್ಕಮಗಳೂರು, ಜುಲೈ 31: ಉದ್ಯಮಿ ಸಿದ್ಧಾರ್ಥ್ ಅವರ ಪಾರ್ಥಿವ ಶರೀರವು ಇದೀಗ ಮಲೆನಾಡಿನ ಹೆಬ್ಬಾಗಿಲು ಕೊಟ್ಟಿಗೆ ಹಾರ ತಲುಪಿದೆ.
ಕೊಟ್ಟಿಗೆ ಹಾರ, ಬಣಕಲ್ ನಲ್ಲಿ ಅಘೋಷಿತ ಬಂದ್; ದರ್ಶನಕ್ಕೆ ಕಾದ ಸಾವಿರಾರು ಜನ
ಸಿದ್ಧಾರ್ಥ್ ಅವರ ಅಂತಿಮ ದರ್ಶನ ಪಡೆಯಲು ರಸ್ತೆಯುದ್ದಕ್ಕೂ ಕಿಕ್ಕಿರಿದು ಸೇರಿದ್ದ ಸಾವಿರಾರು ಅಭಿಮಾನಿಗಳು ಅಗಲಿದ ನಾಯಕನಿಗೆ ಪುಷ್ಪ ನಮನ ಸಲ್ಲಿಸಿದರು.
ಸಿದ್ಧಾರ್ಥ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕೊಟ್ಟಿಗೆಹಾರ ಹಾಗೂ ಬಣಕಲ್ ನಲ್ಲಿ ಅಘೋಷಿತ ಬಂದ್ ಏರ್ಪಟ್ಟಿತ್ತು. ಸಿದ್ಧಾರ್ಥ್ ಅವರ ಪಾರ್ಥಿವ ಶರೀರ ಸಾಗುವ ದಾರಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಅಂತಿಮ ದರ್ಶನಕ್ಕಾಗಿ ಸಾವಿರಾರು ಜನರು ಬೆಳಿಗ್ಗೆಯಿಂದಲೇ ಕಾಯುತ್ತಿದ್ದರು.
ಸಿದ್ಧಾರ್ಥ್ ಸಾವಿಗೆ ಮೂಡಿಗೆರೆಯಾದ್ಯಂತ ಮೌನ; ಸ್ತಬ್ಧಗೊಂಡ ಕಾಫಿ ವಹಿವಾಟು
ಇದೀಗ ಪಾರ್ಥಿವ ಶರೀರ ಕೊಟ್ಟಿಗೆ ಹಾರ ತಲುಪಿದ್ದು, ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದ್ದಾರೆ.
Comments
English summary
The body of businessman Siddharth has now reached kottigehara. Thousands of fans gathered across the road to see Siddhartha.
Story first published: Wednesday, July 31, 2019, 13:40 [IST]