ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಸಿಟಿವಿಟಿ ರೇಟ್‌ನಲ್ಲಿ ಪ್ರಥಮ; ಉಸ್ತುವಾರಿ ಸಚಿವರ ಜೊತೆ ಸಭೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂನ್ 10; ಕೋವಿಡ್ ಸ್ಥಿತಿಗತಿ ಹಾಗೂ ಜಿಲ್ಲೆ ಕೋವಿಡ್ ಪಾಸಿಟಿವಿಟಿ ದರದಲ್ಲಿ ಮೊದಲನೇ ಸ್ಥಾನದಲ್ಲಿರುವ ಹಿನ್ನೆಲೆ ಸ್ಥಿತಿಗತಿಯ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನೆಡೆಸಿದರು.

ಚಿಕ್ಕಮಗಳೂರು ಜಿಲ್ಲೆ ಪಾಸಿಟಿವ್ ರೇಟ್‌ನಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದ್ದು ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಹಾಗೂ ಉಸ್ತುವಾರಿ ಸಚಿವರ ಜೊತೆ ಸಮ್ಮುಖದಲ್ಲಿ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಜನರು ಬರುತ್ತಿರುವ ಹಿನ್ನೆಲೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಚಿಕ್ಕಮಗಳೂರು; ಕೋವಿಡ್ ಕೇರ್‌ ಸೆಂಟರ್‌ನಲ್ಲಿ ಅಧಿಕಾರಿಗಳ ಡ್ಯಾನ್ಸ್ ಚಿಕ್ಕಮಗಳೂರು; ಕೋವಿಡ್ ಕೇರ್‌ ಸೆಂಟರ್‌ನಲ್ಲಿ ಅಧಿಕಾರಿಗಳ ಡ್ಯಾನ್ಸ್

ಜಿಲ್ಲೆಯಲ್ಲಿ 550 ಗ್ರಾಮಗಳು ಕೋವಿಡ್ ಮುಕ್ತ ಗ್ರಾಮಗಳಾಗಿದ್ದು ಆಕ್ಸಿಜನ್ ಬೇಡಿಕೆ ಬಗ್ಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟರು. ಇನ್ನು ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರುವ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ಮುಂದಿನ ದಿನಗಳಲ್ಲಿ ನೀಡುವಂತೆ ಮನವಿ ಮಾಡಲಾಯಿತು.

ಚಿಕ್ಕಮಗಳೂರು; ಮಗನ ಸಾವಿನ ಪ್ರತೀಕಾರ, ವೈದ್ಯರ ಹತ್ಯೆ ಯತ್ನ ಚಿಕ್ಕಮಗಳೂರು; ಮಗನ ಸಾವಿನ ಪ್ರತೀಕಾರ, ವೈದ್ಯರ ಹತ್ಯೆ ಯತ್ನ

Chikkamagaluru Seeks Extension Of Lockdown For Week

ಕೋವಿಡ್ ಪ್ರಮಾಣ ಇಳಿಕೆ; ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, "ಜಿಲ್ಲೆಯಲ್ಲಿ ಸುಮಾರು ಶೇ 54 ಕೋವಿಡ್ ಮುಕ್ತ ಗ್ರಾಮಗಳಿವೆ. ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಯಾಗಿದೆ" ಎಂದು ತಿಳಿಸಿದರು.

ಚಿಕ್ಕಮಗಳೂರು; ಒಂದೇ ಗ್ರಾಮದ 128 ಜನರಿಗೆ ಕೋವಿಡ್ ಚಿಕ್ಕಮಗಳೂರು; ಒಂದೇ ಗ್ರಾಮದ 128 ಜನರಿಗೆ ಕೋವಿಡ್

"ಲಾಕ್‌ಡೌನ್ ಜಿಲ್ಲೆಯಲ್ಲಿ ಒಂದು ವಾರ ಮಂದೂಡಲು ಅವಕಾಶ ಕೇಳಲಾಗಿದೆ. ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಮುಂದಿನ ಕ್ರಮದ ಕುರಿತು ಸಂಜೆ ಸಿಎಂ ಸಭೆಯ ಬಳಿಕ ಜಿಲ್ಲೆಯಲ್ಲಿ ಯಾವ ನಿರ್ಧಾರ ತಗೆದುಕೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನ ತಗೆದುಕೊಳ್ಳಲಾಗುವುದು" ಎಂದು ಸಚಿವರು ಹೇಳಿದರು.

Recommended Video

ಸ್ಪೋಟಕ ಆಡಿಯೋ ಮೂಲಕ ಬಹಿರಂಗ ಆಯ್ತು ರೋಹಿಣಿ ಸಿಂಧೂರಿ, ಸಾರಾ ಮಹೇಶ್ ಜಗಳ | Oneindia Kannada

"ಬೆಂಗಳೂರಲ್ಲಿ ಲಾಕ್‌ಡೌನ್ ಬಳಿಕ ಜನರು ಗ್ರಾಮಗಳತ್ತ ಬರಲು ಪ್ರಾರಂಭಿಸಿದ ಬಳಿಕ ಜಿಲ್ಲೆ ಕೋವಿಡ್ ಪಾಸಿಟಿವಿಟಿಯಲ್ಲಿ ಮೊದಲ ಸ್ಥಾನ ಬರಲು ಕಾರಣ ವಾಗಿದ್ದು ಈಗ ಸಾಕಷ್ಟು ಇಳಿಮುಖ ವಾಗುತ್ತಿದೆ" ಎಂದರು.

English summary
Chikkamagaluru district asked chief minister B. S. Yediyurappa to extension of lockdown till one week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X