ಚಿಕ್ಕಮಗಳೂರು: ಲಕ್ಷಾಂತರ ರೂ. ಬೆಲೆಬಾಳುವ ಶ್ರೀಗಂಧ ಮರಗಳ ಕಳ್ಳತನ
ಚಿಕ್ಕಮಗಳೂರು, ಜೂನ್ 29: ಲಕ್ಷಾಂತರ ರುಪಾಯಿ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಚಿಕ್ಕಮಗಳೂರು ಜಿಲ್ಲೆಯ ದೊರನಾಳು ಗ್ರಾಮದ ಸಮೀಪದ ವಿಶುಕುಮಾರ್ ಎಂಬುವವರ ತೋಟದಲ್ಲಿ ಭಾನುವಾರ ರಾತ್ರಿ ಕಳ್ಳತನ ಮಾಡಲಾಗಿದೆ.
Recommended Video
Congress
Cycle
Rally
against
Fuel
hike
:
ಸೈಕಲ್
ಏರಿ
ಪ್ರತಿಭಟನೆ
ನಡೆಸಿದ
ಕಾಂಗ್ರೆಸ್
ನಾಯಕರು|Oneindia
Kannada
15 ವರ್ಷದ ಆರು ಮರಗಳನ್ನು ಕಡಿದಿರುವ ಕಳ್ಳರು, ಎರಡು ಮರಗಳನ್ನು ತಗೆದುಕೊಂಡು ಹೋಗಿದ್ದಾರೆ. ಇನ್ನುಳಿದ ಎರಡು ಮರಗಳನ್ನು ಸಾಗಿಸುವ ವೇಳೆ ನಾಯಿಗಳು ಬಂದ ಕಾರಣ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕಾಫಿ ನಾಡಿನಲ್ಲಿ ಕಬ್ಬೆಕ್ಕುಗಳ ಸರಣಿ ಸಾವು ತಂದ ಆತಂಕ
ಸುಮಾರು ನಾಲ್ಕೂವರೆ ಎಕರೆ ಜಮೀನಿನಲ್ಲಿ 300 ಶ್ರೀಗಂಧ, ಸಾವಿರಾರು ತೇಗದ ಮರಗಳನ್ನು ಹಾಕಲಾಗಿದೆ. ಕಳೆದ ವರ್ಷವೂ ಸಹ ಎರಡು ಮರಗಳನ್ನು ಕಳ್ಳತನ ಮಾಡಲಾಗಿತ್ತು. ಈ ವೇಳೆ ಸಿಸಿಟಿವಿ ಅಳವಡಿಸಿ ನಾಯಿಗಳನ್ನು ಸಹ ಸಾಕಿ ತೋಟದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಆದರೆ ನಿನ್ನೆ ಮತ್ತೆ ಕಳ್ಳತನವಾಗಿರುವುದು ಮಾಲೀಕರಲ್ಲಿ ಆತಂಕ ಉಂಟುಮಾಡಿದೆ.
Comments
sandalwood tree theft kannada news tarikere chikkamagaluru ಶ್ರೀಗಂಧ ಮರ ಕಳ್ಳತನ ಕನ್ನಡ ಸುದ್ದಿ ತರೀಕೆರೆ ಚಿಕ್ಕಮಗಳೂರು
English summary
Lakhs of rupees worth of sandalwood Tree were stolen on Sunday night in the garden of Visukumar, near Doranalu village in Chikkamagaluru district.
Story first published: Monday, June 29, 2020, 19:04 [IST]