ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ; ಗಾಯದ ಮೇಲೆ ಬರೆ?

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 26: ಮಳೆಯಿಂದ ತತ್ತರಿಸಿ ಈಗಷ್ಟೇ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದ ಜನರಲ್ಲಿ ಮಳೆ ಮತ್ತೆ ಆತಂಕ ತಂದಿದೆ. ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಿನ್ನೆಯಿಂದಲೂ ಮಳೆ ಆರಂಭವಾಗಿದೆ.

ಎರಡು ವಾರಗಳ ಹಿಂದೆ ಚಿಕ್ಕಮಗಳೂರನ್ನು ಬೆಚ್ಚಿ ಬೀಳಿಸಿದ್ದ ಮಳೆ ಕಳೆದ ವಾರವಷ್ಟೆ ಸ್ವಲ್ಪ ತಗ್ಗಿತ್ತು. ಕೆಲ ದಿನಗಳಿಂದ ಮಳೆ ನಿಂತಿದ್ದು, ಮೋಡ ಕವಿದ ವಾತಾವರಣವಿತ್ತು. ಭೂಕುಸಿತ, ರಸ್ತೆ ಕುಸಿತವಾದ ಜಾಗಗಳಲ್ಲಿ ಅದರ ದುರಸ್ತಿ ಕೆಲಸಗಳೂ ನಡೆಯುತ್ತಿದ್ದವು. ಆದರೆ ನಿನ್ನೆ ಮಧ್ಯಾಹ್ನದಿಂದಲೂ ಮಳೆ ಆರಂಭವಾಗಿದ್ದು, ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

ಚಿಕ್ಕಮಗಳೂರಿಗೆ ಭೂ ವಿಜ್ಞಾನಿಗಳ ಭೇಟಿ, ಶೀಘ್ರವೇ ಸರ್ಕಾರಕ್ಕೆ ಸಮಗ್ರ ವರದಿಚಿಕ್ಕಮಗಳೂರಿಗೆ ಭೂ ವಿಜ್ಞಾನಿಗಳ ಭೇಟಿ, ಶೀಘ್ರವೇ ಸರ್ಕಾರಕ್ಕೆ ಸಮಗ್ರ ವರದಿ

ಮನೆಯಿಲ್ಲದೇ ಇನ್ನೂ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನೂರಾರು ಸಂತ್ರಸ್ತರಿದ್ದು, ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರೀ ಮಳೆಯಿಂದ ರಸ್ತೆ ದುರಸ್ತಿ ಕಾರ್ಯಕ್ಕೂ ತೊಡಕಾಗಿದೆ.

Recommended Video

ಚಿಕ್ಕಮಗಳೂರು: ಕಣ್ಣೀರಿಟ್ಟ ನೂತನ ಸಚಿವ ಸಿಟಿ ರವಿ | Oneindia Kannada
Rain Started Again In Mudigere

ನಾಳೆ ಮೂಡಿಗೆರೆ ತಾಲೂಕಿಗೆ ಸಿಎಂ ಯಡಿಯೂರಪ್ಪ ಭೇಟಿಯಾಗಲಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ಹೋಗಿ, ಸಂತ್ರಸ್ತರಿಗೆ ಸಾಂತ್ವನ ಹೇಳಲಿದ್ದಾರೆ.

English summary
The rain has started again in chikkamagaluru. people who are recovering from the destruction are in anxiety again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X