ಚಿಕ್ಕಮಗಳೂರಿನಲ್ಲಿ ನಿರಂತರ ಮಳೆಗೆ ಮರ, ಕಂಬಗಳು ರಸ್ತೆಪಾಲು
Recommended Video
ಕಾಫಿನಾಡಿನ
ಮಲೆನಾಡು
ಭಾಗದಲ್ಲಿ
ಮಳೆಯ
ಅಬ್ಬರ
|
Oneindia
Kannada
ಚಿಕ್ಕಮಗಳೂರು, ಜೂನ್ 13: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದು, ಮೂಡಿಗೆರೆ, ಕಳಸ ಹಾಗೂ ಬಾಳೆಹೊನ್ನೂರು ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ಬತ್ತಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ಹರಿದಿದೆ ನೀರು
ಎರಡು ದಿನದಿಂದ ನಿರಂತರವಾಗಿ ಸುರಿದ ಮಳೆಯಿಂದ ಮಲೆನಾಡಿನ ಕುಗ್ರಾಮಗಳ ರಸ್ತೆಗಳು ಓಡಾಡದಂತಾಗಿವೆ. ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಎಸ್.ಕೆ. ಮೇಗಲ್ ಗ್ರಾಮದಲ್ಲಿ ಕೆಸರು ತುಂಬಿದ್ದ ರಸ್ತೆಯಲ್ಲಿ ಬಸ್ ಸಿಕ್ಕಿಕೊಂಡು ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ಸುಮಾರು ಒಂದು ಗಂಟೆಗೂ ಅಧಿಕ ಹೊತ್ತು ಪರದಾಡಿದ್ದಾರೆ.
ಕೊನೆಗೆ ಜಿಬ್ಸಿಗೆ ಬಸ್ಸನ್ನುಕಟ್ಟಿ, ಸ್ಥಳಿಯರ ಸಹಕಾರದೊಂದಿಗೆ ಎಳೆಯಲಾಯ್ತು. ಮೂಡಿಗೆರೆ ತಾಲ್ಲೂಕಿನ ಜಾವಳಿ ಸಮೀಪ ನಿರಂತರ ಮಳೆಯಿಂದ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಕಳೆದ ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು, ಜನ ಕತ್ತಲಲ್ಲಿ ಬದುಕುವಂತಾಗಿದೆ.
Comments
English summary
Though rain decreased in chikkamagaluru district, the effects are countless. Some disruptions happen in mudigere, kalasa and balehonnuru.
Story first published: Thursday, June 13, 2019, 16:55 [IST]