ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಡಿಗೆರೆಯ ಹಳ್ಳಿಗಳಲ್ಲಿ ನೆಮ್ಮದಿ ಕೆಡಿಸಿದ ಕ್ವಾರಂಟೈನ್ ಜಗಳ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮೇ 21: ಚಿಕ್ಕಮಗಳೂರಿನಲ್ಲಿ ವೈದ್ಯ, ಗರ್ಭಿಣಿ ಸೇರಿದಂತೆ ಐವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಜಿಲ್ಲೆಯ ಜನರ ನಿದ್ದೆಗಡಿಸಿದೆ. ಆದರೆ ಇದೇ ಸಮಯದಲ್ಲಿ, ಕ್ವಾರಂಟೈನ್ ವಿಚಾರದಲ್ಲೂ ಒಳಜಗಳ ಆರಂಭವಾಗಿದೆ.

Recommended Video

ಕರ್ನಾಟಕದಲ್ಲಿ ಒಂದೇ ದಿನಕ್ಕೆ 149 ಕೊರೊನಾ‌ ಕೇಸ್!! | Suresh Kumar

ಮೂಡಿಗೆರೆಯ ಹಳ್ಳಿಗಳಲ್ಲಿ, ಕ್ವಾರೈಂಟೈನ್ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಒಳ ಜಗಳ ಆರಂಭವಾಗಿದೆ. ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಒಂದು ಕಾನೂನು ಏಕೆ, ಕ್ವಾರಂಟೈನ್ ವಿಚಾರದಲ್ಲೂ ರಾಜಕೀಯ ಏಕೆ ಮಾಡುತ್ತಿದ್ದಾರೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಚಿಕ್ಕಮಗಳೂರಿಗೂ ಕಾಲಿಟ್ಟಿತು ಕೊರೊನಾ; ವೈದ್ಯ, ಗರ್ಭಿಣಿ ಸೇರಿ ಐವರಿಗೆ ಸೋಂಕುಚಿಕ್ಕಮಗಳೂರಿಗೂ ಕಾಲಿಟ್ಟಿತು ಕೊರೊನಾ; ವೈದ್ಯ, ಗರ್ಭಿಣಿ ಸೇರಿ ಐವರಿಗೆ ಸೋಂಕು

ಕೈಗೆ ಸೀಲ್ ಹಾಕಿಸಿಕೊಂಡ ಶ್ರೀಮಂತರಿಗೆ ಮನೆಯಲ್ಲಿ ಕ್ವಾರೈಂಟೈನ್ ಮಾಡಲಾಗಿದೆ. ಆದರೆ ಬಡವರಿಗೆ ಸರ್ಕಾರಿ ಕಟ್ಟಡಗಳಲ್ಲಿ ಕ್ವಾರೈಂಟೈನ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಪೊಲೀಸರು ತಮ್ಮ ಬಲ ಪ್ರಯೋಗಿಸಿ ಕ್ವಾರಂಟೈನ್ ಮಾಡುತ್ತಿದ್ದಾರೆ. ಕ್ವಾರೈಂಟೈನ್ ವಿಚಾರದಲ್ಲೂ ಬೇಧಭಾವ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Quarrel Regarding Quarantine In Chikkamagaluru District

ಬಾಳೆಹೊನ್ನೂರಿನಲ್ಲಿ ಸಲೂನ್ ಗಳು ಬಂದ್: ಮುಂಬೈನಿಂದ ಬಂದವರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಸವಿತಾ ಸಮಾಜ, ಬಾಳೆಹೊನ್ನೂರಿನಲ್ಲಿ ಸಲೂನ್ ಬಂದ್ ಮಾಡಲು ಸೂಚಿಸಿದೆ. ಕೆಲಸದ ವೇಳೆ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜೂನ್ 3ರ ವರೆಗೆ ಕೆಲಸ ನಿರ್ವಹಿಸದಿರಲು ಸೂಚನೆ ನೀಡಲಾಗಿದೆ.

English summary
Quarrel has started between people regarding quarantine in mudigere of chikkamagaluru district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X