ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಕನ್ನಡ ಕೈಬರಹ ಸ್ಪರ್ಧೆ
ಮೂಡಿಗೆರೆ, ನವೆಂಬರ್ 04: 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ವತಿಯಿಂದ ರಾಜ್ಯಮಟ್ಟದ ಕನ್ನಡ ಕೈಬರಹ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತೇಜಸ್ಟಿ ಟ್ರಸ್ಟ್ ಈ ಸ್ಪರ್ಧೆ ಆಯೋಜಿಸುತ್ತಿದೆ.
ಮೂರು ವಯೋಮಿತಿಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಯಾವುದಾದರೂ ಒಂದು ಕೃತಿಯ ಯಾವುದಾದರೂ ಒಂದು ಭಾಗವನ್ನು ಆಯ್ದುಕೊಂಡು ನಿಮ್ಮ ಕೈ ಬರಹದಲ್ಲಿ ಬರೆದು ಪ್ರತಿಷ್ಠಾನದ ವಿಳಾಸಕ್ಕೆ ಕಳಿಸಬಹುದು.
ಸ್ಪರ್ಧೆಯ
ನಿಬಂಧನೆಗಳು:
*
12
ವರ್ಷದೊಳಗಿನ
ವಿಭಾಗ,
12ರಿಂದ
ಮೇಲ್ಪಟ್ಟು
18
ವರ್ಷದೊಳಗಿನ
ವಿಭಾಗ,
ಹಾಗೂ
18
ವರ್ಷ
ಮೇಲ್ಪಟ್ಟ
ವಿಭಾಗ
ಎಂದು
ಮೂರು
ವಿಭಾಗದಲ್ಲಿ
ಸ್ಪರ್ಧೆ
ಆಯೋಜಿಸಲಾಗಿದೆ.
*
ಎಲ್ಲಾ
3
ವಿಭಾಗಗಳಲ್ಲೂ
ಪ್ರಥಮ,
ದ್ವಿತೀಯ
,
ತೃತೀಯ
ಹಾಗೂ
2
ಸಮಾಧಾನಕರ
ಬಹುಮಾನವನ್ನು
ನೀಡಲಾಗುತ್ತದೆ.
*
ಕೆ.ಪಿ.ಪೂರ್ಣಚಂದ್ರ
ತೇಜಸ್ವಿ
ಅವರ
ಯಾವುದೇ
ಕೃತಿಯಿಂದ
ಯಾವುದಾದರೊಂದು
ಭಾಗವೊಂದನ್ನು
ಸ್ಪರ್ಧಿಗಳ
ಆಯ್ಕೆ
ಮಾಡಿಕೊಳ್ಳಬಹುದು.
*
ಆಯ್ಕೆ
ಮಾಡಿಕೊಂಡ
ಭಾಗದ
ಲೇಖನವು
100
ಪದ
ಮೀರಬಾರದು.
ಕೈ
ಬರಹದಲ್ಲಿ
ಎ4
ಹಾಳೆಯಲ್ಲಿ
ಬರೆದಿರಬೇಕು.
*
ಎ4
ಹಾಳೆಯಲ್ಲಿ
ಬರೆದ
ಕೈಬರಹದ
3
ಪ್ರತಿಗಳನ್ನು
ಅಂಚೆಯ
ಮೂಲಕ
ಕಳಿಸಬೇಕು.
ಮೂರು
ಪ್ರತಿಗಳು
ಕೈ
ಬರಹದ್ದೇ
ಆಗಿರಬೇಕು.
ಕೈ
ಬರಹದ
ಜೆರಾಕ್ಸ್
ಅಥವಾ
ಟೈಪ್
ಮಾಡಲಾದ
ಪ್ರತಿಗಳನ್ನು
ಕಳಿಸುವಂತಿಲ್ಲ.
*
ನಿಮ್ಮ
ವಯಸ್ಸಿನ
ದೃಡೀಕರಣದ
ಯಾವುದಾದರೊಂದು
ದಾಖಲೆಯೊಂದರ
ಜೆರಾಕ್ಸ್
ಪ್ರತಿಯನ್ನು
ಕೈಬರಹದ
ಲಕೋಟೆಗೆ
ಲಗತ್ತಿಸಬೇಕು.
*
ಇದರ
ಜೊತೆಗೆ
ಸ್ಪರ್ದಿಗಳು
ತಮ್ಮ
ಕಿರು
ಪರಿಚಯವನ್ನು
ಸಂಕ್ಷಿಪ್ತವಾಗಿ
ಬರೆದು,
ಭಾವಚಿತ್ರ
(ಪಾಸ್
ಪೋರ್ಟ್
ಸೈಜ್)
,
ಊರು,
ವಿಳಾಸ,
ವಯಸ್ಸು,
ಮೊಬೈಲ್
ಸಂಖ್ಯೆ
ಒಳಗೊಂಡ
ಮಾಹಿತಿಯನ್ನು
ಪ್ರತ್ಯೇಕ
ಹಾಳೆಯಲ್ಲಿ
ಲಗತ್ತಿಸಬೇಕು.
*
ಸ್ಪರ್ಧಿಯಲ್ಲಿ
ಭಾಗವಹಿಸಿದವರು
ತಮ್ಮ
ಕೈಬರಹದ
ಪ್ರತಿಯನ್ನೇ
ಕಳಿಸಬೇಕು.
ಬೇರೆಯವರು
ಬರೆದ
ಕೈಬರಹವನ್ನು
ಕಳಿಸುವಂತಿಲ್ಲ.
*
ಕೈಬರಹವನ್ನು
ಅಂಚೆ
ಮೂಲಕ
ಅಥವಾ
ಖುದ್ದಾಗಿ
ತಲುಪಿಸಬಹುದು.
*
ನಿಮ್ಮ
ಪ್ರತಿಗಳು
ನವೆಂಬರ್
20,
20214ರೊಳಗೆ
ಪ್ರತಿಷ್ಠಾನಕ್ಕೆ
ತಲುಪತಕ್ಕದ್ದು.
*
ಮೊದಲ
ಬಹುಮಾನಕ್ಕೆ
3,000
ರು,
ಎರಡನೇ
ಬಹುಮಾನಕ್ಕೆ
2,000
ರು
ಹಾಗೂ
ಮೂರನೇ
ಬಹುಮಾನಕ್ಕೆ
1,000
ರು
ಎಂದು
ನಿಗದಿ
ಮಾಡಲಾಗಿದೆ.
ಪ್ರತಿಷ್ಠಾನದ
ವಿಳಾಸ
ಕೆ.ಪಿ.ಪೂರ್ಣಚಂದ್ರ
ತೇಜಸ್ವಿ
ಪ್ರತಿಷ್ಠಾನ,
ಕೊಟ್ಟಿಗೆಹಾರ
ಅಂಚೆ,
ಮೂಡಿಗೆರೆ
ತಾಲ್ಲೂಕು,
ಚಿಕ್ಕಮಗಳೂರು
ಜಿಲ್ಲೆ-577113
,
ಮೇಲ್ಕಂಡ
ವಿಳಾಸಕ್ಕೆ
ಕಳಿಸಿಕೊಡಬೇಕು.
ಗಮನಿಸಿ: ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ 9663098873 , 8971920839 ಗೆ ಸಂರ್ಪಕಿಸಬಹುದಾಗಿದೆ ಎಂದು ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಿದೆ.
ತೇಜಸ್ವಿ ಕೃತಿಗಳಲ್ಲಿ ಪ್ರಕೃತಿಯ ಮಹತ್ವದ ಅನಾವರಣ: ಡಾ.ಕೆ.ಸುಧಾಕರ್
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬಗ್ಗೆ: ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಈ ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದು, ಸರ್ಕಾರವು ಇವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಸ್ಥಾಪಿಸಲಾಗಿದೆ. ಈ ಮುಖಾಂತರ ತೇಜಸ್ವಿಯವರ ಸಾಹಿತ್ಯ, ಪರಿಸರ, ಫೋಟೋಗ್ರಫಿ, ಚಿತ್ರಕಲೆ, ಕೃಷಿ ಮುಂತಾದ ಹಲವಾರು ವಿಚಾರಧಾರೆಗಳನ್ನು ಯುವಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಷ್ಠಾನವು ಕಾರ್ಯೋನ್ಮುಖವಾಗಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಹೊಸ ದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕ. ಕ್ರಿಯಾಶೀಲತೆ ಮತ್ತು ಚಲನಶೀಲತೆ ಅವರ ಸಾಹಿತ್ಯದ ಕೇಂದ್ರ ಆಶಯ. ವ್ಯಕ್ತಿ ವಿಶಿಷ್ಟ ಸಿದ್ಧಾಂತದಿಂದ ಜೀವಕೇಂದ್ರಿತ ಜಗತ್ತಿನ ಶೋಧದ ಕಡೆಗೆ ಅವರ ಸಾಹಿತ್ಯ ವಿಕಾಸವಾಗುತ್ತ ಬೆಳೆಯುತ್ತದೆ. ತಮ್ಮ ಅನುಭವಗಳನ್ನೇ ಕಥನಗಳನ್ನಾಗಿಸಿ, ಅದಕ್ಕೆ ಹೊಸ ವೈಚಾರಿಕತೆ, ದಾರ್ಶನಿಕತೆ ಹಾಗೂ ಉಜ್ವಲ ಕಾಂತಿಯನ್ನು ದೊರಕಿಸಿಕೊಟ್ಟ ಕನ್ನಡದ ಅಪರೂಪದ ಲೇಖಕ ತೇಜಸ್ವಿ.
ಅವರ ಸಾಹಿತ್ಯದ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನಕ್ರಮ, ಭಾಷೆಯ ಬಳಕೆ, ಹೊಸ ನುಡಿಗಟ್ಟುಗಳ ಶೋಧ ತಮ್ಮ ಎಲ್ಲ ಬರಹಗಳಲ್ಲಿ ನಿರಂತರವಾಗಿ ಅನ್ವೇಷಣೆಗೆ ಒಳಪಟ್ಟಿದ್ದವು ಎಂಬುದಕ್ಕೆ ಅವರ ಅಗಾಧ ಕೃತಿಗಳೇ ಸಾಕ್ಷಿಯಾಗಿವೆ. ಅನುವಾದ, ಚಿತ್ರಕಲೆ, ಫೋಟೋಗ್ರಫಿ, ಸಿತಾರ್ ವಾದನ , ಸಂಗೀತ ಆಸ್ವಾದನೆ, ಮೀನು ಶಿಕಾರಿ, ಬೇಟೆ, ಪಕ್ಷಿ ವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಗೆಗಿನ ಕುತೂಹಲ ಹಾಗೂ ಅದರ ಬಳಕೆಯ ಸಾಧ್ಯತೆಗಳು, ಅಡುಗೆ ಹೀಗೆ ಹತ್ತು ಹಲವು ಇವರ ಆಸಕ್ತಿ, ಅಭಿರುಚಿ, ಕುತೂಹಲಗಳಾಗಿದ್ದವು. ಹಾಗಾಗಿ ತೇಜಸ್ವಿ ಎಂದರೇನೆ ಒಂದು ವಿಸ್ಮಯ, ನಿಗೂಢ.