ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವಾಸದ ಮೈತ್ರಿ ಅಲ್ಲ, ಸಂಚಿನ ಕೂಟ; ಸಿ.ಟಿ.ರವಿ ವ್ಯಂಗ್ಯ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ವಿಶ್ವಾಸದ ಮೈತ್ರಿ ಅಲ್ಲ, ಸಂಚಿನ ಕೂಟ; ಸಿ.ಟಿ.ರವಿ ವ್ಯಂಗ್ಯ | Oneindia Kannada

ಚಿಕ್ಕಮಗಳೂರು, ಆಗಸ್ಟ್ 26: "ಇವರದ್ದು ವಿಶ್ವಾಸದ ಮೈತ್ರಿ ಅಲ್ಲ, ಬಿಜೆಪಿಯನ್ನು ಕೆಳಗಿಳಿಸಲು ರಚಿಸಿದ ರಾಜಕೀಯ ಸಂಚಿನ ಕೂಟ ಅಷ್ಟೆ. ಈಗ ಸತ್ಯವೆಲ್ಲಾ ಸಾಬೀತಾಗುತ್ತಿದೆ" ಎಂದು ಮೈತ್ರಿ ಸರ್ಕಾರದ ಕುರಿತು ವ್ಯಂಗ್ಯ ಮಾಡಿದರು ಸಚಿವ ಸಿ.ಟಿ.ರವಿ.

ಮೈತ್ರಿ ಸರ್ಕಾರದ ಘಟಾನುಘಟಿ ನಾಯಕರ ವಾಗ್ವಾದ ವಿಚಾರದ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಎಚ್ ಡಿ ಕೆ, ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

 ಕಾಂಗ್ರೆಸ್-ಜೆಡಿಎಸ್ ನಡುವೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ : ಸಿ.ಟಿ.ರವಿ ಕಾಂಗ್ರೆಸ್-ಜೆಡಿಎಸ್ ನಡುವೆ ಮ್ಯಾಚ್ ಫಿಕ್ಸಿಂಗ್ ನಡೆದಿದೆ : ಸಿ.ಟಿ.ರವಿ

"ಮೊದಲಿನಿಂದಲೂ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಮುಖ್ಯ ಉದ್ದೇಶದಿಂದಲೇ ಮೈತ್ರಿ ಮಾಡಿಕೊಂಡಿದ್ದು ಎಂಬ ಮಾತು ಇತ್ತು. ಅದು ಸತ್ಯ ಎಂಬುದು ಸಾಬೀತಾಗಿದೆ. ಈ ಮೈತ್ರಿ ಎಂಬುದು ಪರಸ್ಪರರನ್ನು ಮುಗಿಸಲು ರಚಿಸಿಕೊಂಡ ರಾಜಕೀಯ ದುಷ್ಟಕೂಟ. ಅತೃಪ್ತರ ಇಂದಿನ ಪರಿಸ್ಥಿತಿಗೆ ಹಿಂದಿನ ಸಭಾಧ್ಯಕ್ಷರೇ ಕಾರಣ" ಎಂದು ಪ್ರತಿಕ್ರಿಯಿಸಿದರು.

Not A Coalition Government But Conspiracy Said CT Ravi In Chikkamagaluru

"ಚುನಾವಣೆ ಬಗ್ಗೆ ನಮಗೆ ಹೆದರಿಕೆ ಇಲ್ಲ. ಸರ್ಕಾರ ಎಷ್ಟು ದಿನ ಇರುತ್ತದೋ ಅಷ್ಟು ದಿನ‌ ಒಳ್ಳೆ ಕೆಲಸ ಮಾಡ್ತೇವೆ. ನಮಗೆ ಚುನಾವಣೆ ಅಥವಾ ಸರ್ಕಾರದ ಅಳಿವು ಉಳಿವಿನ ಬಗ್ಗೆ ಆತಂಕವೇ ಇಲ್ಲ" ಎಂದರು.

"ಮಣ್ಣೆತ್ತಿದ್ದು ನೀವಲ್ಲ"; ಚಿಕ್ಕಮಗಳೂರಿನಲ್ಲಿ ಎಚ್ ಡಿಕೆಗೆ ಟಾಂಗ್ ನೀಡಿದ ಸಿ.ಟಿ.ರವಿ

ಖಾತೆ ಹಂಚಿಕೆ‌ ವಿಚಾರವಾಗಿಯೂ ಮಾತನಾಡಿದ ಅವರು, "ನಾನು ಮಂತ್ರಿ ಸ್ಥಾನವನ್ನೇ ಬಯಸಿರಲಿಲ್ಲ. ಹಾಗಾಗಿ ಇದೇ ಖಾತೆ ಬೇಕು ಅನ್ನೋ ಬಯಕೆ ಇಲ್ಲ. ಯಾವ ಖಾತೆಯನ್ನು ನೀಡಿದ್ರೂ ಕೆಲಸ ಮಾಡ್ತೇನೆ" ಎಂದು ಹೇಳಿದರು.

English summary
"This is not a coalition government, it is a political conspiracy to bring down the BJP. Now the truth is proving" said Minister CT Ravi in Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X