ಸಿದ್ಧಾರ್ಥ್ ಕುಟುಂಬಕ್ಕೆ ಧೈರ್ಯ ಹೇಳಿದ ನಿರ್ಮಲಾನಂದನಾಥ ಸ್ವಾಮೀಜಿ
ಚಿಕ್ಕಮಗಳೂರು, ಆಗಸ್ಟ್ 2: ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶುಕ್ರವಾರ ಬೆಳಿಗ್ಗೆ ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕಷ್ಟ ನಷ್ಟ ಸಹಜ, ದುಡುಕಬೇಡಿ; ಪೇಜಾವರ ಶ್ರೀ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಚೇತನಹಳ್ಳಿ ಎಸ್ಟೇಟ್ನಲ್ಲಿರುವ ಸಿದ್ಧಾರ್ಥ್ ಅವರ ಮನೆಗೆ ಸ್ವಾಮೀಜಿ ಇಂದು ಬೆಳಗ್ಗೆ ಭೇಟಿ ನೀಡಿದ್ದರು. ಸಿದ್ಧಾರ್ಥ ಅವರ ತಾಯಿ ವಾಸಂತಿ ಹೆಗ್ಟೆ, ಪತ್ನಿ ಮಾಳವಿಕಾ, ಮಕ್ಕಳಾದ ಅಮಾರ್ತ್ಯ ಹಾಗೂ ಈಶಾನ್ ಅವರಿಗೆ ಸ್ವಾಮೀಜಿ ಧೈರ್ಯ ಹೇಳಿದರು.
ಕೆಫೆ ಕಾಫಿ ಡೇ ಮಾಲೀಕ, ಹೆಸರಾಂತ ಉದ್ಯಮಿ ವಿ.ಜಿ ಸಿದ್ಧಾರ್ಥ ಸೋಮವಾರ ಸಂಜೆ ಮಂಗಳೂರಿನ ಉಳ್ಳಾಲದ ನೇತ್ರಾವತಿ ಸೇತುವೆಯಿಂದ ನಾಪತ್ತೆಯಾಗಿದ್ದರು. ಬುಧವಾರ ಬೆಳಗ್ಗೆ ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಹುಟ್ಟೂರು ಚೇತನಹಳ್ಳಿಗೆ ತಂದು ಬುಧವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
Comments
English summary
Nirmalanandanath Swamiji of adichunchanagiri mutt Visited mudigere Chethanahalli Estate on friday. He spoke with the family of vg siddhartha.
Story first published: Friday, August 2, 2019, 11:39 [IST]