ಚಾರ್ಮಾಡಿ ಘಾಟ್; ಸಂಜೆ 7ರ ನಂತರ ವಾಹನ ಸಂಚಾರಕ್ಕೆ ನಿರ್ಬಂಧ
ಚಿಕ್ಕಮಗಳೂರು, ಜುಲೈ 9: ಚಾರ್ಮಾಡಿ ಘಾಟ್ ನಲ್ಲಿ ಇಂದಿನಿಂದ ಸಂಜೆ 7ರಿಂದ ಬೆಳಿಗ್ಗೆ 7 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಗೌತಮ್ ಬಗಾದಿ ಆದೇಶ ಹೊರಡಿಸಿದ್ದಾರೆ.
Recommended Video
Facebook
,
Instagram
,
tinder
ಸೇರಿದಂತೆ
ಬಾರತೀಯ
ಸೇನೆಯು
89
ಆ್ಯಪ್ಗಳನ್ನು
ನಿಷೇಧಿಸಿದೆ.|
Oneindia
Kannada
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮಳೆಯಿಂದ ಅಪಾಯ ಎದುರಾಗುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಚಾರ್ಮಾಡಿ ಘಾಟ್ ಮಧ್ಯೆ ವಾಹನ ನಿಲ್ಲಿಸಿದರೆ ಕೇಸ್
ಪ್ರತಿ ಮಳೆಗಾಲದಲ್ಲೂ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗುತ್ತದೆ. ಮರ, ಕಂಬಗಳು ಜೋರು ಮಳೆಯಿಂದಾಗಿ ನೆಲಕ್ಕುರುಳುವ ಸಂಗತಿಗಳೂ ಜರುಗುತ್ತವೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಇಂದಿನಿಂದ ಸಂಜೆ ಏಳು ಗಂಟೆ ನಂತರ ಯಾವುದೇ ವಾಹನಗಳು ಸಂಚರಿಸದಂತೆ ನಿರ್ಬಂಧ ಹೇರಿರುವುದಾಗಿ ಜಿಲ್ಲಾಧಿಕಾರಿ ಗೌತಮ್ ಬಗಾದಿ ಆದೇಶದಲ್ಲಿ ತಿಳಿಸಿದ್ದಾರೆ.
Comments
English summary
Chikkamagaluru DC Gautam Bagadi has issued an order to the restriction on vehicle at Charmadi Ghat from 7pm to 7am,