ನೋಡುಗರ ಮನ ಕಲಕುವಂತಿತ್ತು ತಾಯಿಯ ಜೊತೆ ಸಾವಿಗೆ ಶರಣಾದ ಕಂದಮ್ಮನ ದೃಶ್ಯ
ಚಿಕ್ಕಮಗಳೂರು, ನವೆಂಬರ್.13: ಸಾಲ ಮರುಪಾವತಿಗೆ ಬ್ಯಾಂಕ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ತಾಯಿ, ಮಗು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ.
ಅನು (23 ವರ್ಷ) ಹಾಗೂ ದರ್ಶನ್ (2) ಸಾವಿಗೆ ಶರಣಾದವರು. ತಾಯಿಯ ಜೊತೆ ಏನೂ ಅರಿಯದ ಮುಗ್ಧ ಕಂದಮ್ಮ ಸಹ ಸಾವನ್ನಪ್ಪಿದ ದೃಶ್ಯ ಕಟುಕರ ಮನವೂ ಕಲಕುವಂತಿತ್ತು.
ಸಾಲ ಪಡೆದವ ಅಪಘಾತದಲ್ಲಿ ಸಾವು: ಸಾಲ ಕೊಟ್ಟವರು ಆತ್ಮಹತ್ಯೆ
ಘಟನೆಯ
ವಿವರ
ನವೆಂಬರ್
2ರಂದು
50
ಸಾವಿರ
ರೂಪಾಯಿ
ಸಾಲ
ಮರುಪಾವತಿಗೆ
ವಿಜಯ್
ಬ್ಯಾಂಕ್
ನೋಟಿಸ್
ನೀಡಿದ್ದು,
ತೋಟ
ಮಾರಿ
ಸಾಲ
ತೀರಿಸುವ
ವಿಚಾರದಲ್ಲಿ
ಅನು
ಹಾಗೂ
ಅವರ
ಗಂಡನ
ನಡುವೆ
ಕಲಹವುಂಟಾಗಿತ್ತು.
ಹಾಸನ: ಗಂಡನ ಲೈಂಗಿಕ ಹಿಂಸೆಗೆ ಬೇಸತ್ತು ಸೆಲ್ಫಿ ವಿಡಿಯೋ ಮಾಡಿ ನವವಧು ಆತ್ಮಹತ್ಯೆ
ಈ ಘಟನೆಯಿಂದ ಮನನೊಂದ ಅನು ಇಂದು ಮಂಗಳವಾರ ಬೆಳಗಿನ ಜಾವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
English summary
Mother committed suicide with a baby incident occurred in Haliyuru at Tarikere. A case has been registered in Tarikere police station.