ಚಿಕ್ಕಮಗಳೂರಿನಲ್ಲಿ ಮನೆಗೇ ನುಗ್ಗಿದ ಲಾರಿ; ಆಟವಾಡುತ್ತಿದ್ದ ಬಾಲಕ ಸಾವು
ಚಿಕ್ಕಮಗಳೂರು, ಆಗಸ್ಟ್ 13: ತರಕಾರಿ ಹೊತ್ತೊಯ್ಯುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ನುಗ್ಗಿ ಮನೆ ಮುಂದೆ ಆಟವಾಡುತ್ತಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ಇಂದು ನಡೆದಿದೆ.
Recommended Video
DJ
ಹಳ್ಳಿಯಲ್ಲಿ
ಇದೀಗ
ಶುರುವಾಯ್ತು
ಹೊಸ
ಆತಂಕ
|
Oneindia
Kannada
ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಿಕ್ಕಮಗಳೂರಿನಿಂದ ಕುಂದಾಪುರ ಮಾರ್ಗವಾಗಿ ತರಕಾರಿ ಲಾರಿ ಹೋಗುತ್ತಿತ್ತು. ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮನೆಗೆ ಲಾರಿ ನುಗ್ಗಿದೆ. ಅಲ್ಲೇ ಮನೆ ಮುಂದೆ ಆಟವಾಡಿಕೊಂಡಿದ್ದ ಬಾಲಕನ ಮೇಲೆ ಲಾರಿ ಎರಗಿ ಬಂದಿದ್ದು, ಸುರೇಶ್ (10) ಎಂಬ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಚಿತ್ರದುರ್ಗದಲ್ಲಿ ಕಾರು- ಬೈಕ್ ಅಪಘಾತ; ಬೈಕ್ ಸವಾರ ಸಾವು
ಮಂಜುನಾಥಗೌಡ ಎಂಬುವರ ಲೈನ್ ಮನೆಯಲ್ಲಿ ಈ ಕಾರ್ಮಿಕ ಕುಟುಂಬ ವಾಸವಾಗಿತ್ತು. ಲಾರಿ ನುಗ್ಗಿದ ರಭಸಕ್ಕೆ ಮನೆಯ ಅರ್ಧ ಭಾಗ ಸಂಪೂರ್ಣ ಜಖಂ ಆಗಿದೆ. ಪುಟ್ಟ ಬಾಲಕನ ಪ್ರಾಣವೂ ಹೋಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Comments
English summary
Lorry rushed to home by loosing driver control and kills 10 year old boy in jenugadde village of chikkamaglauru,