ಲಾಕ್ ಡೌನ್ ಹಿನ್ನೆಲೆ: ಹೊರನಾಡು ದೇವಾಲಯದಿಂದ ಸಹಾಯ
ಚಿಕ್ಕಮಗಳೂರು, ಮಾರ್ಚ್ 31: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಹೀಗಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ವತಿಯಿಂದ ಬಡವರಿಗೆ ಹಾಲು ಮತ್ತು ದಿನಸಿ ವಿತರಣೆ ಮಾಡಲಾಗುತ್ತಿದೆ.
ಕಳೆದ ಮೂರು ದಿನಗಳಿಂದ ಹೊರನಾಡು ಮತ್ತು ಕಳಸ ಭಾಗದ ಜನರಿಗೆ ದಿನಸಿ ಸಾಮಾನು ಮತ್ತು ಹಾಲು ಪೂರೈಕೆ ಮಾಡಲಾಗುತ್ತಿದ್ದು, ಇದರಿಂದ ಬಡವರಿಗೆ ಸಹಾಯವಾಗಿದೆ.
ಸಾಮಾಜಿಕ ಅಂತರ ಕಾಪಾಡಿಕೊಂಡು ಅಗತ್ಯ ವಸ್ತುಗಳನ್ನು ದೇವಾಲಯದಿಂದ ಪೂರೈಕೆ ಮಾಡುತ್ತಿದೆ. ಲಾಕ್ ಡೌನ್ ನಿಂದ ಕಂಗೆಟ್ಟ ಮಲೆನಾಡು ಮತ್ತು ಕಾಫಿನಾಡಿನ ಕಾರ್ಮಿಕರಿಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿ ಸಹಾಯ ಮಾಡಲು ಮುಂದೆ ಬಂದಿದೆ.
Comments
English summary
Milk and groceries are being distributed to the poor by the Annapoorneshwari temple in Horanadu.