ಬದುಕಿನ ಅನುಭವವನ್ನು ಶಕ್ತಿಯುತವಾಗಿ ಅಭಿವ್ಯಕ್ತಿಸುತ್ತಿದ್ದ ಪೂರ್ಣಚಂದ್ರ ತೇಜಸ್ವಿ
ಕೊಟ್ಟಿಗೆಹಾರ, ಅಕ್ಟೋಬರ್ 12: ''ಬದುಕಿನ ಅನುಭವದ ಸೂಕ್ಷ್ಮತೀಸೂಕ್ಷ್ಮಗಳನ್ನು ಅಭಿವ್ಯಕ್ತಿಸುವ ಭಾಷೆಯನ್ನು ಶಕ್ತಿಯುತವಾಗಿ ಬಳಸಿದವರು ತೇಜಸ್ವಿ.'' ಎಂದು ಬರಹಗಾರರಾದ ರವೀಶ್ ಕ್ಯಾತನಬೀಡು ಹೇಳಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ''ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು'' ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಜುಗಾರಿಕ್ರಾಸ್ ಕೃತಿಯ ಬಗ್ಗೆ ಅವರು ಮಾತನಾಡಿದರು.
''ಬದುಕಿನ ನಿಗೂಢತ್ವವನ್ನು ಬಿಡಿಸುವ ಎಳೆಗಳೆ ತೇಜಸ್ವಿ ಅವರ ಎಲ್ಲಾ ಸಾಹಿತ್ಯದಲ್ಲಿ ಕಾಣಸಿಗುತ್ತವೆ. ಅಸಂಗತವಾದ ವಿಚಾರಗಳು ಕೂಡ ಬದುಕಿಗೆ ಬಹಳ ಪೂರಕವಾಗಿರುವಂತಹ ಸುಸಂಗತ ಸಂಗತಿಗಳಾಗಿ ಕಾಣುವಂತೆ ಕಟ್ಟುವ ಕ್ರಿಯೆಯನ್ನು ತೇಜಸ್ವಿಯವರು ಮಲೆನಾಡಿನ ಮೂಡಿಗೆರೆಯ ಪರಿಸರದೊಳಗೆಯೇ ನಿಂತು ಧ್ಯಾನಿಸಿರುವುದು ಕೂಡ ವಿಶೇಷವಾದದ್ದು,'' ಎಂದು ರವೀಶ್ ಹೇಳಿದರು.
ತೇಜಸ್ವಿ ವಿಭಿನ್ನ ಯೋಚನಾಶೈಲಿಯೇ ಅವರ ಹೆಗ್ಗುರುತು: ಸಿದ್ದರಾಮಯ್ಯ
ವಿಜ್ಞಾನದ ಚರ್ಚೆಯನ್ನು ಕನ್ನಡದ ಕಥನದಲ್ಲಿ ಅಳವಡಿಸಿದ ತೇಜಸ್ವಿ ಅವರ ಕಥನ ಪ್ರಯೋಗವೂ ಕನ್ನಡಕ್ಕೆ ಕೊಟ್ಟ ಶಕ್ತಿಯ ಸ್ವರೂಪವನ್ನು ಅರಿಯುವ ಅಗತ್ಯವಿದೆ. ತಮ್ಮ ಚಿಂತನೆಯಿಂದ ನಾಡಿನ ಮನಸ್ಸುಗಳನ್ನು ರೂಪಿಸಿದವರು ತೇಜಸ್ವಿ ಎಂದರು.
ಈ ಸಂದರ್ಭದಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್ ಹ್ಯಾರಿಸ್ ಉಪಸ್ಥಿತರಿದ್ದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ತೇಜಸ್ವಿ ಓದು ಕಾರ್ಯಕ್ರಮ ಕಾಲಕಾಲಕ್ಕೆ ನಡೆಸಲಾಗುತ್ತದೆ. ಈ ಹಿಂದಿನ ಕಂತಿನಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ವ್ಯಕ್ತಿ ವಿಶಿಷ್ಟ ಸಿದ್ಧಾಂತ ಮತ್ತು ಯಮಳ ಪ್ರಶ್ನೆ ಕೃತಿಯ ಬಗ್ಗೆ ಲೇಖಕ, ಕನ್ನಡ ಉಪನ್ಯಾಸಕ ಡಾ. ಸಂಪತ್ ಬೆಟ್ಟಗೆರೆ ಅವರು ಮಾತನಾಡಿದ್ದರು.
ಇದಕ್ಕೂ ಮುನ್ನ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾಸನದ ಅಬಚೂರಿನ ಮಿತ್ರವೃಂದ ಪ್ರಕಾಶನದ ವತಿಯಿಂದ ನಡೆದ ತೇಜಸ್ವಿ ಸಾಹಿತ್ಯ ವಿಚಾರ ಮಂಥನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ತೇಜಸ್ವಿ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿತ್ತು.
ಕೆ.ಪಿ.ಪೂರ್ಣಚಂದ್ರ
ತೇಜಸ್ವಿ
ಬಗ್ಗೆ:
ಕೆ.ಪಿ.ಪೂರ್ಣಚಂದ್ರ
ತೇಜಸ್ವಿಯವರು
ಈ
ನಾಡು
ಕಂಡ
ಶ್ರೇಷ್ಠ
ಸಾಹಿತಿಗಳಲ್ಲಿ
ಒಬ್ಬರಾಗಿದ್ದು,
ಸರ್ಕಾರವು
ಇವರ
ಹೆಸರಿನಲ್ಲಿ
ಪ್ರತಿಷ್ಠಾನವನ್ನು
ಚಿಕ್ಕಮಗಳೂರು
ಜಿಲ್ಲೆಯ
ಕೊಟ್ಟಿಗೆಹಾರದಲ್ಲಿ
ಸ್ಥಾಪಿಸಲಾಗಿದೆ.
ಈ
ಮುಖಾಂತರ
ತೇಜಸ್ವಿಯವರ
ಸಾಹಿತ್ಯ,
ಪರಿಸರ,
ಫೋಟೋಗ್ರಫಿ,
ಚಿತ್ರಕಲೆ,
ಕೃಷಿ
ಮುಂತಾದ
ಹಲವಾರು
ವಿಚಾರಧಾರೆಗಳನ್ನು
ಯುವಜನಾಂಗಕ್ಕೆ
ತಲುಪಿಸುವ
ನಿಟ್ಟಿನಲ್ಲಿ
ಪ್ರತಿಷ್ಠಾನವು
ಕಾರ್ಯೋನ್ಮುಖವಾಗಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಹೊಸ ದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕ. ಕ್ರಿಯಾಶೀಲತೆ ಮತ್ತು ಚಲನಶೀಲತೆ ಅವರ ಸಾಹಿತ್ಯದ ಕೇಂದ್ರ ಆಶಯ. ವ್ಯಕ್ತಿ ವಿಶಿಷ್ಟ ಸಿದ್ಧಾಂತದಿಂದ ಜೀವಕೇಂದ್ರಿತ ಜಗತ್ತಿನ ಶೋಧದ ಕಡೆಗೆ ಅವರ ಸಾಹಿತ್ಯ ವಿಕಾಸವಾಗುತ್ತ ಬೆಳೆಯುತ್ತದೆ. ತಮ್ಮ ಅನುಭವಗಳನ್ನೇ ಕಥನಗಳನ್ನಾಗಿಸಿ, ಅದಕ್ಕೆ ಹೊಸ ವೈಚಾರಿಕತೆ, ದಾರ್ಶನಿಕತೆ ಹಾಗೂ ಉಜ್ವಲ ಕಾಂತಿಯನ್ನು ದೊರಕಿಸಿಕೊಟ್ಟ ಕನ್ನಡದ ಅಪರೂಪದ ಲೇಖಕ ತೇಜಸ್ವಿ.
Recommended Video
ಅವರ ಸಾಹಿತ್ಯದ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನಕ್ರಮ, ಭಾಷೆಯ ಬಳಕೆ, ಹೊಸ ನುಡಿಗಟ್ಟುಗಳ ಶೋಧ ತಮ್ಮ ಎಲ್ಲ ಬರಹಗಳಲ್ಲಿ ನಿರಂತರವಾಗಿ ಅನ್ವೇಷಣೆಗೆ ಒಳಪಟ್ಟಿದ್ದವು ಎಂಬುದಕ್ಕೆ ಅವರ ಅಗಾಧ ಕೃತಿಗಳೇ ಸಾಕ್ಷಿಯಾಗಿವೆ. ಅನುವಾದ, ಚಿತ್ರಕಲೆ, ಫೋಟೋಗ್ರಫಿ, ಸಿತಾರ್ ವಾದನ , ಸಂಗೀತ ಆಸ್ವಾದನೆ, ಮೀನು ಶಿಕಾರಿ, ಬೇಟೆ, ಪಕ್ಷಿ ವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಗೆಗಿನ ಕುತೂಹಲ ಹಾಗೂ ಅದರ ಬಳಕೆಯ ಸಾಧ್ಯತೆಗಳು, ಅಡುಗೆ ಹೀಗೆ ಹತ್ತು ಹಲವು ಇವರ ಆಸಕ್ತಿ, ಅಭಿರುಚಿ, ಕುತೂಹಲಗಳಾಗಿದ್ದವು. ಹಾಗಾಗಿ ತೇಜಸ್ವಿ ಎಂದರೇನೆ ಒಂದು ವಿಸ್ಮಯ, ನಿಗೂಢ.