ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡೆದ ಬಾಳೆಹೊನ್ನೂರು ಬಂದ್ ಯಶಸ್ವಿ
ಚಿಕ್ಕಮಗಳೂರು, ಡಿಸೆಂಬರ್ 1: ಕಸ್ತೂರಿ ರಂಗನ್ ವರದಿ ವಿರೋಧಿಸಿ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಂಜಾನೆಯಿಂದಲೇ ಅಂಗಡಿ- ಮುಂಗಟ್ಟುಗಳಿಗೆ ಬೀಗ ಹಾಕಿ ವರ್ತಕರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೇ ನಗರದೆಲ್ಲೆಡೆ ಆಟೋ ಇನ್ನಿತರ ವಾಹನ ಸಂಚಾರ ಸಹ ಬಂದ್ ಮಾಡಲಾಗಿತ್ತು. ರೈತ ಸಂಘಟನೆ, ಪ್ರಗತಿಪರ ಸಂಘಟನೆಗಳು ಹಾಗೂ ಜನ ಪ್ರತಿನಿಧಿಗಳು ಸೇರಿದಂತೆ ಸಾವಿರಾರು ಪ್ರತಿಭಟನಾಕಾರರು ಬಾಳೆಹೊನ್ನೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾಕಾರರು, ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ಆಗುವ ಅನಾಹುತಗಳ ಬಗ್ಗೆ ಘೋಷಣೆಗಳನ್ನು ಕೂಗಿದರು. ಅಲ್ಲದೇ ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಳಿಸಲು ಹೊರಟಿರುವ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಾ.ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ಕರ್ನಾಟಕ ಸರ್ಕಾರ
ಕಸ್ತೂರಿ
ರಂಗನ್
ವರದಿಗೆ
ಮಲೆನಾಡಲ್ಲಿ
ಯಾಕೆ
ವಿರೋಧ?
ರಾಜ್ಯದ
1553ಕ್ಕೂ
ಹೆಚ್ಚು
ಹಳ್ಳಿಗಳ
20,668
ಚದರ
ಕಿ.ಮೀ.
ಪ್ರದೇಶ
ಪರಿಸರ
ಸೂಕ್ಷ್ಮ
ಪ್ರದೇಶದಲ್ಲಿ
ಸೇರಿದೆ.
ಇದರಲ್ಲಿ
ಚಿಕ್ಕಮಗಳೂರು
ಜಿಲ್ಲೆಯ
ಚಿಕ್ಕಮಗಳೂರು
ತಾಲೂಕಿನ
27,
ಕೊಪ್ಪ
32,
ಮೂಡಿಗೆರೆ
27,
ನರಸಿಂಹರಾಜಪುರ
35,
ಶೃಂಗೇರಿ
26
ಹಳ್ಳಿಗಳಿಗೆ
ತೊಂದರೆ
ಆಗುತ್ತದೆ.
ಅಲ್ಲದೇ
ಈ
ಎಲ್ಲಾ
ಹಳ್ಳಿಗಳು
ಕಸ್ತೂರಿ
ರಂಗನ್
ವರದಿ
ಜಾರಿಯಾಗುವ
ಪ್ರದೇಶದಲ್ಲಿದ್ದು,
ಈಗಿನ
ಮೂಲ
ಸ್ಥಾನಗಳನ್ನು
ಬಿಟ್ಟು
ಜನರು
ಹೊರ
ಬರಬೇಕಾಗುತ್ತದೆ.
ಇನ್ನು ಕಸ್ತೂರಿ ರಂಗನ್ ವರದಿ ಜಾರಿಯಾದರೆ ಇಲ್ಲಿನ ಅಭಿವೃದ್ಧಿ ಸಹ ಕುಂಠಿತವಾಗುತ್ತದೆ. ಈಗಾಗಲೇ ಹಲವು ಹಳ್ಳಿಗಳು ರಸ್ತೆ ಸಂಪರ್ಕ ಇನ್ನಿತರ ಮೂಲಸೌಲಭ್ಯದಿಂದ ವಂಚಿತವಾಗಿದ್ದು, ಈ ವರದಿ ಜಾರಿಯಾದರೆ ಮಲೆನಾಡಿನ ಜನರಿಗೆ ಮತ್ತಷ್ಟು ತೊಂದರೆ ಉಂಟಾಗುತ್ತದೆ.
ಚಿಕ್ಕಮಗಳೂರು ಜಿಲ್ಲೆ ಕಾಫಿಗೆ ಹೆಸರುವಾಸಿಯಾಗಿದ್ದು, ಇಲ್ಲಿನ ಸಾಕಷ್ಟು ಕಾಫಿ ಬೆಳೆಯುವ ಪ್ರದೇಶವೂ ಇದಕ್ಕೆ ಒಳಪಡುತ್ತದೆ. ಇದರಿಂದ ರೈತರಿಗೂ ಸಾಕಷ್ಟು ತೊಂದರೆಯಾಗುತ್ತದೆ ಎಂಬುದು ಮಲೆನಾಡಿಗರ ಅಭಿಪ್ರಾಯ. ಹೀಗಾಗಿಯೇ ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತವಾಗುತ್ತಿದೆ.