11 ವರ್ಷದ ನಂತರ ತುಂಬಿದ ಕಳಸಾಪುರ ದೊಡ್ಡ ಕೆರೆ
ಚಿಕ್ಕಮಗಳೂರು, ಅಕ್ಟೋಬರ್ 12: ಬರೋಬ್ಬರಿ 11 ವರ್ಷಗಳ ಬಳಿಕ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ದೊಡ್ಡ ಕೆರೆ ಭರ್ತಿಯಾಗಿ ಕೋಡಿ ಬೀಳುವ ಮೂಲಕ ಈ ಭಾಗದ ರೈತರಲ್ಲಿ ಸಂತೋಷ ತಂದಿದೆ.
ಕೆ.ಆರ್.ಪೇಟೆಯ ದೇವೀರಮ್ಮಣ್ಣಿ ಕೆರೆಯಲ್ಲೀಗ ನೀರ ಹಾಡು...
ಹನ್ನೊಂದು ವರ್ಷಗಳಿಂದ ತೀರ್ವ ಬರಗಾಲಕ್ಕೆ ತುತ್ತಾಗಿ ಬಳಲಿ ಬೆಂಡಾಗಿದ್ದ ಗಾಳಿಕೆರೆ, ಹಿರೆಹಳ್ಳಿ, ಕಳಸಾಪುರ ಗ್ರಾಮಗಳಲ್ಲಿ ಕೆರೆ ತುಂಬಿದ್ದಕ್ಕೆ ಪ್ರತಿ ಮನೆಗಳಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕರಗಡ ಯೋಜನೆಯಲ್ಲಿ ಪೈಪ್ ಗಳ ಮೂಲಕ ಕಳೆದ 2 ತಿಂಗಳಿನಿಂದಲೂ ನೀರು ಹಾಯಿಸಲಾಗುತ್ತಿತ್ತು. ಆದರೂ ಕೆರೆ ತುಂಬದೆ ಜನರಲ್ಲಿ ನಿರಾಸೆ ಮೂಡಿಸಿತ್ತು.
ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಸುರಿದ ಭಾರೀ ಮಳೆಗೆ ಕಳಸಾಪುರ ಕೆರೆ ತುಂಬಿ ಕೋಡಿ ಒಡೆದಿದೆ. ಒಂದು ದಶಕದಿಂದ ಕೆರೆಯಲ್ಲಿ ನೀರಿಲ್ಲದೆ ಸುತ್ತಲಿನ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿದು ರೈತರ ತೋಟಗಳು ಸಂಪೂರ್ಣ ಒಣಗಿ ಹೋಗಿದ್ದವು. ಆದರೆ ಈ ವರ್ಷದ ಉತ್ತಮ ಮಳೆಗೆ ಕೆರೆ ಭರ್ತಿಯಾಗಿದೆ. ಇನ್ನೂ ಎರಡು ಕೆರೆಗಳು ತುಂಬುವ ನಿರೀಕ್ಷೆಯಿದ್ದು, ಜನರಲ್ಲಿ ಆಶಾಭಾವನೆ ಮೂಡಿಸಿದೆ.