ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

11 ವರ್ಷದ ನಂತರ ತುಂಬಿದ ಕಳಸಾಪುರ ದೊಡ್ಡ ಕೆರೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್ 12: ಬರೋಬ್ಬರಿ 11 ವರ್ಷಗಳ ಬಳಿಕ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ದೊಡ್ಡ ಕೆರೆ ಭರ್ತಿಯಾಗಿ ಕೋಡಿ ಬೀಳುವ ಮೂಲಕ ಈ ಭಾಗದ ರೈತರಲ್ಲಿ ಸಂತೋಷ ತಂದಿದೆ.

 ಕೆ.ಆರ್.ಪೇಟೆಯ ದೇವೀರಮ್ಮಣ್ಣಿ ಕೆರೆಯಲ್ಲೀಗ ನೀರ ಹಾಡು... ಕೆ.ಆರ್.ಪೇಟೆಯ ದೇವೀರಮ್ಮಣ್ಣಿ ಕೆರೆಯಲ್ಲೀಗ ನೀರ ಹಾಡು...

ಹನ್ನೊಂದು ವರ್ಷಗಳಿಂದ ತೀರ್ವ ಬರಗಾಲಕ್ಕೆ ತುತ್ತಾಗಿ ಬಳಲಿ ಬೆಂಡಾಗಿದ್ದ ಗಾಳಿಕೆರೆ, ಹಿರೆಹಳ್ಳಿ, ಕಳಸಾಪುರ ಗ್ರಾಮಗಳಲ್ಲಿ ಕೆರೆ ತುಂಬಿದ್ದಕ್ಕೆ ಪ್ರತಿ ಮನೆಗಳಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕರಗಡ ಯೋಜನೆಯಲ್ಲಿ ಪೈಪ್ ಗಳ ಮೂಲಕ ಕಳೆದ 2 ತಿಂಗಳಿನಿಂದಲೂ ನೀರು ಹಾಯಿಸಲಾಗುತ್ತಿತ್ತು. ಆದರೂ ಕೆರೆ ತುಂಬದೆ ಜನರಲ್ಲಿ ನಿರಾಸೆ ಮೂಡಿಸಿತ್ತು.

Kalasapura Doddakere Fills After 11 Year In Chikkamagaluru

ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಸುರಿದ ಭಾರೀ ಮಳೆಗೆ ಕಳಸಾಪುರ ಕೆರೆ ತುಂಬಿ ಕೋಡಿ ಒಡೆದಿದೆ. ಒಂದು ದಶಕದಿಂದ ಕೆರೆಯಲ್ಲಿ ನೀರಿಲ್ಲದೆ ಸುತ್ತಲಿನ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿದು ರೈತರ ತೋಟಗಳು ಸಂಪೂರ್ಣ ಒಣಗಿ ಹೋಗಿದ್ದವು. ಆದರೆ ಈ ವರ್ಷದ ಉತ್ತಮ ಮಳೆಗೆ ಕೆರೆ ಭರ್ತಿಯಾಗಿದೆ. ಇನ್ನೂ ಎರಡು ಕೆರೆಗಳು ತುಂಬುವ ನಿರೀಕ್ಷೆಯಿದ್ದು, ಜನರಲ್ಲಿ ಆಶಾಭಾವನೆ ಮೂಡಿಸಿದೆ.

English summary
Kalasapura Doddakere in Chikkamagaluru district has filled by rain water after 11 years and made the farmers happy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X