ಕಡೂರು; ಸೋಮನಹಳ್ಳಿ ತಾಂಡದ ರಕ್ಷಿತಾ ಕುಟುಂಬಕ್ಕೆ ಇದುವರೆಗೂ 10 ಲಕ್ಷ ಪರಿಹಾರ
ಚಿಕ್ಕಮಗಳೂರು, ಸೆಪ್ಟೆಂಬರ್, 27: ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡದ ರಕ್ಷಿತಾ ಬಾಯಿ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಭೈರತಿ ಬಸವರಾಜ್ ಭೇಟಿ ನೀಡಿದ್ದಾರೆ. ಮಗಳು ರಕ್ಷಿತಾಳ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದ ಕುಟುಂಬಕ್ಕೆ ಸಚಿವ ಭೈರತಿ ಬಸವರಾಜ್ 8 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು. ಭೈರತಿ ಬಸವರಾಜ್ ವ್ಯಯಕ್ತಿಕ 2 ಲಕ್ಷ ರೂಪಾಯಿ ನೀಡಿದ್ದು, ಇದುವರೆಗೂ ರಕ್ಷಿತಾ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದಾರೆ.
2
ಲಕ್ಷ
ರೂ.
ಪರಿಹಾರ
ನೀಡಿದ
ಭೈರತಿ
ಬಸವರಾಜ್
ಜಿಲ್ಲಾಡಳಿತದಿಂದ
5
ಲಕ್ಷ
ರೂಪಾಯಿ,
ಭೈರತಿ
ಬಸವರಾಜ್
ವೈಯಕ್ತಿಕ
2
ಲಕ್ಷ
ರೂಪಾಯಿ,
ತಾಂಡ
ನಿಗಮದಿಂದ
1
ಲಕ್ಷ
ರೂಪಾಯಿ
ಚೆಕ್
ವಿತರಣೆ
ಮಾಡಿದ್ದಾರೆ.
ಇನ್ನು
ಉದ್ಯಮಶೀಲತೆ
ಯೋಜನೆಯಡಿ
2
ಲಕ್ಷ
ಪರಿಹಾರವನ್ನು
ಮಂಜೂರು
ಮಾಡಲಾಗಿತ್ತು.
ಎಂಟು
ದಿನದ
ಹಿಂದೆ
ಬಸ್
ಹತ್ತುವಾಗ
ರಕ್ಷಿತಾ
ಬಿದ್ದಿದ್ದು,
ಅವರ
ತಲೆಗೆ
ಗಂಭೀರವಾಗಿ
ಗಾಯವಾಗಿತ್ತು.
ನಂತರ
ಅವರನ್ನು
ಸ್ಥಳೀಯ
ಆಸ್ಪತ್ರೆಗೆ
ಸಾಗಿಸಲಾಗಿದ್ದ,
ಅಲ್ಲಿ
ಚಿಕಿತ್ಸೆ
ಫಲಕಾರಿಯಾಗದೆ
ಸಾವನ್ನಪ್ಪಿದ್ದರು.
ಚಿಕ್ಕಮಗಳೂರು; ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಸೋಮನಹಳ್ಳಿ ತಾಂಡದ ರಕ್ಷಿತಾ; ಕುಟುಂಬಕ್ಕೆ 8 ಲಕ್ಷ ಪರಿಹಾರ
ಬಳಿಕ ವೈದ್ಯರ ಸಲಹೆಯ ಮೇರೆಗೆ ಕುಟುಂಬದವರು ರಕ್ಷಿತಾಳ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದರು. ಈ ಮೂಲಕ 9 ಜನರ ಜೀವನಕ್ಕೆ ಬೆಳಕಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಚಿಕ್ಕಮಗಳೂರು ನಗರದಲ್ಲಿ ರಕ್ಷಿತಾ ಪ್ರಥಮ ಪಿಯುಸಿ ಓದುತ್ತಿದ್ದಳು. ಬಸ್ಸಿನಿಂದ ಬಿದ್ದ ಬಳಿಕ ಆಕೆಯ ಮೆದುಳು ನಿಷ್ಕ್ರಿಯಗೊಂಡಿತ್ತು. ಹಾಗಾಗಿ ಕುಟುಂಬಸ್ಥರು ಆಕೆಯ ಎಲ್ಲಾ ಅಂಗಾಂಗಗಳನ್ನು ದಾನ ಮಾಡಿದ್ದರು. ಹೀಗೆ ರಕ್ಷಿತಾ ಒಂಬತ್ತು ಜನರ ಜೀವನಕ್ಕ ಬೆಳಕಾಗಿದ್ದಾರೆ.
ರಕ್ಷಿತಾ
ಕುಟುಂಬಕ್ಕೆ
8
ಲಕ್ಷ
ಪರಿಹಾರ
ಚಿಕ್ಕಮಗಳೂರು
ಜಿಲ್ಲೆ
ಸೋಮನಹಳ್ಳಿ
ತಾಂಡದ
ಪಿಯು
ವಿದ್ಯಾರ್ಥಿನಿ
ರಕ್ಷಿತಾ
ಸಾವನ್ನಪಿದ್ದು,
ಆಕೆಯ
ಅಂಗಾಂಗಗಳನ್ನು
ಕುಟುಂಬಸ್ಥರು
ದಾನ
ಮಾಡಲು
ಒಪ್ಪಿದ್ದರು.
ಹೀಗೆ
ಮಗಳ
ಸಾವಿನಲ್ಲೂ
ಸಾರ್ಥಕತೆ
ಮೆರೆದ
ಕುಟುಂಬಕ್ಕೆ
8
ಲಕ್ಷ
ಪರಿಹಾರವನ್ನು
ನೀಡಲಾಗಿದೆ.
ಮೆದುಳು
ನಿಷ್ಕ್ರಿಯಗೊಂಡ
ಬಳಿಕ
ರಕ್ಷಿತಾಳ
9
ಅಂಗಾಂಗಗಳನ್ನು
ದಾನ
ಮಾಡಿದ್ದ
ಕುಟುಂಬಸ್ಥರಿಗೆ
ಪರಿಹಾರವನ್ನು
ನೀಡಲಾಗಿದೆ.
ಚಿಕ್ಕಮಗಳೂರು
ಜಿಲ್ಲೆಯಲ್ಲಿ
ಪ್ರಥಮ
ಪಿಯುಸಿ
ಓದುತ್ತಿದ್ದ
ರಕ್ಷಿತಾ
ಬಸ್
ಹತ್ತುವಾಗ
ಬಿದ್ದಿದ್ದಳು.
ಪರಿಣಾಮ
ಮೆದುಳು
ನಿಷ್ಕ್ರಿಯಗೊಂಡು
ಆಕೆ
ಸಾವನ್ನಪ್ಪಿದ್ದಳು.
ನಂತರ
ವೈದ್ಯರ
ಸಲಹೆಯ
ಮೇರೆಗೆ
ಆಕೆಯ
ಪೋಷಕರು
ಮಗಳ
ಅಂಗಾಂಗಗಳನ್ನು
ದಾನ
ಮಾಡಲು
ಒಪ್ಪಿಗೆಯನ್ನು
ಸೂಚಿಸಿದ್ದರು.
ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದ ರಕ್ಷಿತಾಳ ಕುಟುಂಬಕ್ಕೆ 8 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದ್ದು, ತಾಂಡ ಅಭಿವೃದ್ಧಿ ನಿಗಮದಿಂದ 1 ಲಕ್ಷ ಪರಿಹಾರ ನೀಡಲಾಗಿತ್ತು. ಇನ್ನು ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ಪರಿಹಾರವನ್ನು ಮಂಜೂರು ಮಾಡಲಾಗಿತ್ತು. ಸಾವನ್ನಪಿದ ರಕ್ಷಿತಾಳನ್ನು ನೆನೆದು ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರೆಲ್ಲ ಕಣ್ಣೀರಿಟ್ಟಿದ್ದರು. ರಕ್ಷಿತಾಗೆ ಸಾವಿರಾರು ವಿದ್ಯಾರ್ಥಿನಿಯರು ಕಣ್ಣೀರಿನ ವಿದಾಯ ಹೇಳಿದ್ದರು.