ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡೂರು ಕೊಲೆ ಪ್ರಕರಣ: ಡಾ.ರೇವಂತ್ ಆತ್ಮಹತ್ಯೆ ಸುದ್ದಿ ಕೇಳಿ ಪ್ರಿಯತಮೆ ಸೂಸೈಡ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 23: ದಂತವೈದ್ಯ ರೇವಂತ್ ಪತ್ನಿ ಕವಿತಾಳ ಕೊಲೆ ಮತ್ತು ರೇವಂತ್ ಆತ್ಮಹತ್ಯೆ ಸುದ್ದಿ ಬೆನ್ನಲ್ಲಿಯೇ ಆತನ ಬೆಂಗಳೂರಿನ ಪ್ರೇಯಸಿ ಹರ್ಷಿತಾ ನೇಣಿಗೆ ಶರಣಾಗಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದಲ್ಲಿ ನಡೆದಿದ್ದ ಫ್ಯಾಮಿಲಿ ದುರಂತದಲ್ಲಿ ದಂತವೈದ್ಯನ ಪತ್ನಿ ಕೊಲೆ ಹಾಗೂ ಗಂಡನ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಫೆ. 17 ರಂದು ಕಡೂರಿನ ಲಕ್ಷ್ಮೀಶ ನಗರದ ಡಾ. ರೇವಂತ್ ಮನೆಯಲ್ಲಿ ದರೋಡೆಯಾಗಿತ್ತು.

ಕಡೂರು ಕವಿತಾಳನ್ನು ಕೊಂದಿದ್ದು ಆಕೆಯ ಗಂಡನೇ!ಕಡೂರು ಕವಿತಾಳನ್ನು ಕೊಂದಿದ್ದು ಆಕೆಯ ಗಂಡನೇ!

ಈ ವೇಳೆ ದಂತ ವೈದ್ಯ ರೇವಂತ್ ಪತ್ನಿ ಕವಿತಾ ರನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಪತ್ನಿ ಕೊಲೆ ಮಾಡಿ ವೈದ್ಯ ರೇವಂತ್ ರೈಲು ಹಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಇದಾಗಿದೆ.

Kadur Murder Case: Dr. Revanth Lover Harshitha Commit Suicide In Bengaluru

ಡಾಕ್ಟರ್ ರೇವಂತ್ ಆತ್ಮಹತ್ಯೆ ಸುದ್ದಿ ಕೇಳಿ ಪ್ರಿಯತಮೆನೂ ಕೂಡಾ ಸೂಸೈಡ್ ಮಾಡಿಕೊಂಡಿದ್ದಾಳೆ. ನೇಣು ಬಿಗಿದುಕೊಂಡು ಹರ್ಷಿತ (32) ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಫೆಬ್ರವರಿ ೧೭ ರಂದು ಡಾ.ರೇವಂತ್ ತನ್ನ ಪತ್ನಿ ಕವಿತಾಳನ್ನು ಕೊಲೆ ಮಾಡಿದ್ದ. ನಂತರ ಪೊಲೀಸ್ ತನಿಖೆಯಲ್ಲಿ ದಂತವೈದ್ಯ ರೇವಂತ್ ನ ಅಸಲಿಯತ್ತು ಬಯಲಾಗಿತ್ತು. ಹರ್ಷಿತ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ರೇವಂತ್, ಪತ್ನಿಯನ್ನು ಸ್ವತಃ ತಾನೇ ಕೊಲೆ ಮಾಡಿದ್ದನು.

ಕಡೂರಿನಲ್ಲಿ ಬರ್ಬರವಾಗಿ ಮಹಿಳೆ ಕೊಲೆಕಡೂರಿನಲ್ಲಿ ಬರ್ಬರವಾಗಿ ಮಹಿಳೆ ಕೊಲೆ

ಕೊಲೆ ಪ್ರಕರಣ ತನ್ನ ಕೊರಳಿಗೆ ಸುತ್ತಿಕೊಳ್ಳುತ್ತಿದ್ದಂತೆಯೇ ಪೊಲೀಸ್ ಬಂಧನಕ್ಕೆ ಹೆದರಿ ನಿನ್ನೆ ರೈಲಿಗೆ ಸಿಲುಕಿ ರೇವಂತ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಈಗ ಅವನ ಪ್ರೇಯಸಿ ಹರ್ಷಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹರ್ಷಿತಾಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗು ಕೂಡಾ ಇದೆ.

English summary
Dr Revanth Lover Harshitha Lover commit suicide in Rajarajeshwari nagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X