ಚಿಕ್ಕಮಗಳೂರು: ಐಸೋಲೇಷನ್ ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು
ಚಿಕ್ಕಮಗಳೂರು, ಮೇ 24: ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು ಆಸ್ಪತ್ರೆಯ ಶೌಚಾಲಯದಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
Recommended Video
ಗ್ರೀನ್
ಜೋನ್ನಲ್ಲಿದ್ದಂತ
ಚಿಕ್ಕಮಗಳೂರಿಗೆ
ಕಾದಿದೆಯ
ಸಂಕಷ್ಟ
?
|
Chikkamagalur
|
Oneindia
Kannada
ಇದೇ ಮೇ 19 ರಂದು 53 ವರ್ಷದ ಪುರುಷ ವ್ಯಕ್ತಿಗೆ ಐಎಲ್ಐ ಗುಣಲಕ್ಷಣವಿದ್ದ ಕಾರಣ ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಟಲು ಮತ್ತು ಮೂಗಿನ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಹಿಸಲಾಗಿತ್ತು. ನಂತರ ಚಿಕ್ಕಮಗಳೂರಿನ ಕೋವಿಡ್ ಕೇರ್ ಸೆಂಟರ್ ಗೆ ವರ್ಗಾವಣೆ ಮಾಡಲಾಗಿತ್ತು.
ಮೂಡಿಗೆರೆಯ ವೈದ್ಯನಿಗಿಲ್ಲ ಸೋಂಕು; ಕ್ವಾರಂಟೈನ್ ನಲ್ಲಿದ್ದ 485 ಮಂದಿ ಬಿಡುಗಡೆ
ಆದರೆ ಇಂದು ಬೆಳಿಗ್ಗೆ 9 ಗಂಟೆಗೆ ಆತ ಶೌಚಾಲಯಕ್ಕೆ ಹೋದವನು, ಅಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಸರ್ಜನ್, ಆತನ ವರದಿ ನೆಗೆಟಿವ್ ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಗೆ ಮೂಲವ್ಯಾದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
Comments
chikkamagaluru isolation hospitals suicide coronavirus doctor hospital kannada news koppa ಚಿಕ್ಕಮಗಳೂರು ಆತ್ಮಹತ್ಯೆ ವೈರಸ್ ವೈದ್ಯ ಆಸ್ಪತ್ರೆ ಕನ್ನಡ ಸುದ್ದಿ ಕೊಪ್ಪ
English summary
Isolated person who was committed suicide in Chikkamagaluru hospital toilet.