ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಪುಟ ವಿಸ್ತರಣೆ ಕಗ್ಗಂಟಿನ ನಡುವೆ ಕಾರಜೋಳ ಸಚಿವ ಸ್ಥಾನ ತ್ಯಾಗದ ಮಾತು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 28: ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿರುವ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಚಿವ ಸ್ಥಾನ ತ್ಯಾಗದ ಮಾತುಗಳನ್ನು ಆಡಿದ್ದಾರೆ.

ಹಿಂದೂ ಟೆರರಿಸಂ ಎನ್ನುವುದನ್ನು ನಾನು ಕೇಳಿಯೇ ಇಲ್ಲ: ಗೋವಿಂದ್ ಕಾರಜೋಳಹಿಂದೂ ಟೆರರಿಸಂ ಎನ್ನುವುದನ್ನು ನಾನು ಕೇಳಿಯೇ ಇಲ್ಲ: ಗೋವಿಂದ್ ಕಾರಜೋಳ

ಚಿಕ್ಕಮಗಳೂರಿನಲ್ಲಿ ಇಂದು ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, "ಪಕ್ಷ ಸೂಚಿಸಿದರೆ ಇಲ್ಲಿಂದಲೇ ಸರ್ಕಾರಿ ಕಾರು ವಾಪಸ್ ಕಳಿಸಿ ಬಸ್ ನಲ್ಲಿ ಹೋಗ್ತೇನೆ" ಎಂದರು.

I Am Ready To Leave My Position Said DCM Govinda Karajola In Chikkamagaluru

"ಜಾತಿ ಆಧಾರದ ಮೇಲೆ ಒತ್ತಡಗಳು ಹೆಚ್ಚಾಗಬಾರದು. ಪಕ್ಷಕ್ಕಾಗಿ ದುಡಿದವರನ್ನು ಆಧರಿಸಿ ವರಿಷ್ಟರು ನಿರ್ಣಯ ಮಾಡುತ್ತಾರೆ" ಎಂದು ತಿಳಿಸಿದರು. ಡಿಸಿಎಂ ಸ್ಥಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಇನ್ನು ಹಲವರು ಡಿಸಿಎಂ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಆ ಬಗ್ಗೆ ತೀರ್ಮಾನಿಸುವುದು ಪಕ್ಷದ ವರಿಷ್ಟರಿಗೆ ಬಿಟ್ಟ ವಿಚಾರ" ಎಂದಷ್ಟೇ ಹೇಳಿದರು.

English summary
"I am ready to leave my position if party tell me to do that" said deputy chief minister, Govinda Karajola in chikkamagaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X