ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಗ್ಲಾಪುರದ ಕಡಲೆಕೆರೆಯಲ್ಲಿ ಬೀಡುಬಿಟ್ಟ ಆನೆ ನೋಡಲು ಜನವೋ ಜನ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ 15: ಜಿಲ್ಲೆಯ ತರೀಕೆರೆ ತಾಲೂಕಿನ ದುಗ್ಲಾಪುರ ಗ್ರಾಮದಲ್ಲಿ ಭಾನುವಾರ ರಾತ್ರಿಯಿಂದಲೇ ಜನರಲ್ಲಿ ಆತಂಕ ಮನೆ ಮಾಡಿತ್ತು. ಗ್ರಾಮದ ಕಡಲೆಕೆರೆಯಲ್ಲಿ ಆನೆ ಕಾಣಿಸಿಕೊಂಡಿದೆ ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿ, ಅತ್ತ ಸುಳಿದಾಡಲು ಸಹ ಕೆಲವರು ಹೆದರಿದರೆ, ಆನೆಯನ್ನು ಕಾಡಿಗೆ ಅಟ್ಟಿದರೆ ಸಾಕೆಂಬ ಚಿಂತೆ ಹಲವರದಾಗಿತ್ತು.

 ಕಾಡಿನಿಂದ ನಾಡಿಗೆ ಬಂದು ಜಾರಿ ಬಿದ್ದ ಕಾಡಾನೆ ಕಾಡಿನಿಂದ ನಾಡಿಗೆ ಬಂದು ಜಾರಿ ಬಿದ್ದ ಕಾಡಾನೆ

ಗ್ರಾಮದ ಕಡಲೆಕೆರೆಯಲ್ಲಿ ಆನೆ ಇದೆ ಎಂಬ ಸುದ್ದಿ ಅರಣ್ಯ ಇಲಾಖೆಗೆ ತಲುಪಿ, ಅದನ್ನು ಕಾಡಿಗೆ ಅಟ್ಟಲು ಸಿಬ್ಬಂದಿ ಬರುವ ವೇಳೆಗೆ ಅದಾಗಲೇ ಆನೆಯನ್ನು ನೋಡುವ ಸಲುವಾಗಿ ಅಂಥ ಹಳ್ಳಿಯಲ್ಲೂ ಜನರು ಬರಲು ಆರಂಭಿಸಿದ್ದರು. ಅಂತೂ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದರು.

hundreds of people came to watch elephant in chikkamagaluru

ಎಷ್ಟೇ ಹರಸಾಹಸ ಪಟ್ಟರೂ ಕೆರೆ ಬಿಟ್ಟು ಬರಲೊಲ್ಲದ ಆನೆ ಒಂದು ಕಡೆ, ಊರಿಗೆ ಬಂದಿರುವ ಕಾಡಾನೆಯನ್ನು ನೋಡಲು ಸೇರುತ್ತಿರುವ ಅಪಾರ ಸಂಖ್ಯೆಯ ಜನರು ಮತ್ತೊಂದು ಕಡೆ. ಇದೀಗ ಇನ್ನೂ ಎಷ್ಟು ಸಮಯ ಈ ಕಾರ್ಯಾಚರಣೆ ಮುಂದುವರಿಯತ್ತದೋ ಕಾದು ನೋಡಬೇಕಾಗಿದೆ. ಒಂದು ಸಲ ಕೆರೆಯಿಂದ ಆಚೆ ಬಂದು, ಕಾಡಿಗೆ ಆನೆಯನ್ನು ಅಟ್ಟಿದರೆ ಗ್ರಾಮಸ್ಥರಿಗೆ ನೆಮ್ಮದಿ.

English summary
People had already started arriving in the duglapura village to see the elephant which came from forest to kadalakere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X