ಚಾರ್ಮಾಡಿ ಘಾಟ್ ನಲ್ಲಿ ಗಾಳಿ ಸಹಿತ ಭಾರೀ ಮಳೆ
ಚಿಕ್ಕಮಗಳೂರು, ಜೂನ್ 01: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇಂದು ಭರ್ಜರಿ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದೆ.
Recommended Video
ಎಲ್ಲಾ
ಕ್ರಿಕೆಟ್
ಪಂದ್ಯಗಳು
ಮೊದಲೇ
ಫಿಕ್ಸ್
ಆಗಿರುತ್ತವೆಯೇ
?
|
Oneindia
Kannada
ಮೂಡಿಗೆರೆ, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್ ಆರ್ ಪುರ, ಮುಳ್ಳಯ್ಯನಗಿರಿ ಭಾಗಗಳಲ್ಲಿ ಮಳೆಯಾಗುತ್ತಿದೆ. ಚಾರ್ಮಾಡಿ ಘಾಟ್ ನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಒಂದೆಡೆ ಆತಂಕವೂ ಶುರುವಾಗಿದೆ. ನಗರದಲ್ಲಿ ಧಾರಾಕಾರ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಎರಡು ದಿನ ಭಾರಿ ಗಾಳಿ, ಮಳೆ; ಕೊಡಗು ಜಿಲ್ಲೆಗೆ Orange ಅಲರ್ಟ್
ಕಡೂರು, ತರೀಕೆರೆ ತಾಲೂಕಿನ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಮೂಡಿಗೆರೆಯ ಚಾರ್ಮಾಡಿಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದೆ. ಕೊಟ್ಟಿಗೆಹಾರ, ಮಲೆಮನೆ, ದುರ್ಗದಹಳ್ಳಿ, ಬಾಳೂರು ಸುತ್ತಮುತ್ತ ಈ ರೀತಿ ನಿರಂತರ ಮಳೆಯಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ತುಂಬಿದೆ. ಕಳೆದ ಬಾರಿ ಅತಿವೃಷ್ಟಿಯಿಂದ ಈ ಪ್ರದೇಶಗಳಲ್ಲಿ ಪ್ರವಾಹ ಸಂಭವಿಸಿತ್ತು. ಹೀಗಾಗಿ ಹೀಗೆ ಮಳೆ ಸುರಿಯುತ್ತಿರುವುದು ಭಯವನ್ನೂ ಉಂಟುಮಾಡಿದೆ.
Comments
English summary
Heavy rain with wind reported in charmadi ghat of chikkamagaluru district today. People of kottigehara, durgadahalli, baluru worried about flood,
Story first published: Monday, June 1, 2020, 17:11 [IST]