ಸರ್ಕಾರ ಉಳಿಸಲು ದೇವರ ಮೊರೆ ಹೋದ ರೇವಣ್ಣ
Recommended Video
ಶೃಂಗೇರಿ
ಶಾರದಾಂಬೆ
ದೇವಸ್ಥಾನಕ್ಕೆ
ಭೇಟಿ
ನೀಡಿದ
ಎಚ್
ಡಿ
ರೇವಣ್ಣ
|
Oneindia
Kannada
ಚಿಕ್ಕಮಗಳೂರು, ಜುಲೈ 9: ರಾಜ್ಯ ರಾಜಕಾರಣದಲ್ಲಿ ಭಾರೀ ತಲ್ಲಣ ಉಂಟಾಗಿದ್ದು, ಲೋಕೋಪಯೋಗಿ ಸಚಿವ ರೇವಣ್ಣ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ. ಶೃಂಗೇರಿಗೆ ಬಂದು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಾತಿಗೆ ಬದ್ದರಾಗದ ಸಮ್ಮಿಶ್ರ ಸರಕಾರದ 'ಜೋಡೆತ್ತು'ಗಳು ಬೇಲಿ ಹಾರಿದಾಗ!
ಸರ್ಕಾರವನ್ನು ಉಳಿಸಿಕೊಡುವಂತೆ ಶಾರದಾಂಬೆಯಲ್ಲಿ ಬೇಡಿಕೊಂಡಿದ್ದಾರೆ. ಒಟ್ಟು ಇದೇ ವಾರದಲ್ಲಿ ಎರಡು ಬಾರಿ ಶೃಂಗೇರಿಗೆ ರೇವಣ್ಣ ಭೇಟಿ ನೀಡಿದಂತಾಗಿದೆ. ಶಾರದಾಂಬೆ ದೇವೇಗೌಡರ ಕುಟುಂಬದ ಇಷ್ಟ ದೈವವಾಗಿದ್ದು, ಈ ಹಿಂದೆ ದೇವೇಗೌಡರೂ ಕುರ್ಚಿಗಾಗಿ ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದರು. ಇಲ್ಲೇ ಮೂರ್ನಾಲ್ಕು ಯಾಗ ಮಾಡಿಸಿದ್ದರು ಸಿಎಂ ಕುಮಾರಸ್ವಾಮಿ. ಸರ್ಕಾರಕ್ಕೆ ಸಂಚಕಾರ ಬಂದಾಗೆಲ್ಲಾ ಶಾರದಾಂಬೆಯಲ್ಲಿ ಪೂಜೆ ಸಲ್ಲಿಸಿ, ಬೇಡಿಕೊಂಡು ಯಾಗ ನಡೆಸುವುದು ಗೌಡರ ಕುಟುಂಬದ ರೂಢಿಯಲ್ಲಿದೆ.
ಇಂದು ಬೆಳಿಗ್ಗೆ ಶೃಂಗೇರಿಗೆ ಭೇಟಿ ನೀಡಿದ್ದ ರೇವಣ್ಣ ಪೂಜೆ ಸಲ್ಲಿಸಿ ವಾಪಸ್ಸಾಗಿದ್ದಾರೆ.
Comments
hd revanna sringeri temple coalition government chikkamagaluru ಎಚ್ ಡಿ ರೇವಣ್ಣ ಶೃಂಗೇರಿ ದೇವಸ್ಥಾನ ಮೈತ್ರಿ ಸರ್ಕಾರ ಚಿಕ್ಕಮಗಳೂರು
English summary
There has been a lot of change in state politics. sopwd minister HD Revanna visited shringeri sharadamba temple and offered special pooja for sharadambe and prayed to save government.
Story first published: Tuesday, July 9, 2019, 11:39 [IST]