ಚಿಕ್ಕಮಗಳೂರು: ಮದುವೆಯಾಗಬೇಕಿದ್ದ ದಿನವೇ ಯುವಕ ಕೊರೊನಾ ಸೋಂಕಿಗೆ ಸಾವು
ಚಿಕ್ಕಮಗಳೂರು, ಏಪ್ರಿಲ್ 29: ಇಂದು ಮದುವೆಯಾಗಿ ನವ ದಾಂಪತ್ಯಕ್ಕೆ ಕಾಲಿಡಬೇಕಿದ್ದ ಯುವಕ ಕೊರೊನಾ ಸೋಂಕಿಗೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
Recommended Video
#Coviddeath
ಹಸೆಮಣೆ
ಏರಬೇಕಿದ್ದ
ವರ
ಕೊರೊನಾಗೆ
ಬಲಿ,
ಮದುವೆ
ಮನೆಯಲ್ಲಿ
ಸೂತಕದ
ವಾತಾವರಣ!
|
Oneindia
Kannada
ಪೃಥ್ವಿರಾಜ್(32) ಕೊರೊನಾ ಸೋಂಕಿಗೆ ಬಲಿಯಾದ ಯುವಕನಾಗಿದ್ದು, ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.
ಆದಷ್ಟು ಬೇಗ ಭಾರತ ಬಿಡುವುದು ಸುರಕ್ಷಿತ; ಅಮೆರಿಕ ಎಚ್ಚರಿಕೆ
ಇಂದು (ಏ.29, ಗುರುವಾರ) ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಯುವಕ ಪೃಥ್ವಿರಾಜ್, ಬೆಂಗಳೂರಿನಿಂದ ಹತ್ತು ದಿನಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದರು. ಆದರೆ ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವರನ ಅಕಾಲಿಕ ನಿಧನದಿಂದಾಗಿ ಸಂಭ್ರಮ ಮನೆ ಮಾಡಬೇಕಿದ್ದ ಕುಟುಂಬದಲ್ಲೀಗ ಸೂತಕದ ಛಾಯೆ ಆವರಿಸಿದೆ.
Comments
chikkamagaluru coronavirus marriage oxygen Guidelines koppa ಚಿಕ್ಕಮಗಳೂರು ವೈರಸ್ ಮದುವೆ ಆಮ್ಲಜನಕ ಮಾರ್ಗಸೂಚಿಗಳು ಕೊಪ್ಪ
English summary
A Groom was died on the day of wedding due to coronavirus in Devarakodige village of Koppa taluk, Chikkaamagaluru district.