ಕರ್ನಾಟಕದಲ್ಲಿ ಅಪರೂಪಕ್ಕೆ ಗೋಚರವಾಗಿದ್ದ ನೀಲ್ ಗಾಯ್ ಹುಲಿ ದಾಳಿಗೆ ಬಲಿ
ಚಿಕ್ಕಮಗಳೂರು, ನವೆಂಬರ್.13: ಕರ್ನಾಟಕದಲ್ಲಿ ಅಪರೂಪಕ್ಕೆ ಗೋಚರವಾಗಿದ್ದ ನೀಲ್ ಗಾಯ್ ಸಾವನ್ನಪ್ಪಿರುವ ಘಟನೆ ಸೋಮವಾರ (ನ.12) ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಕಳೆದ ವರ್ಷ 20 ವರ್ಷದ ಬಳಿಕ ಮತ್ತೆ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಗೋಚರವಾಗಿದ್ದ ನೀಲ್ ಗಾಯ್ ಉತ್ತರ ಭಾರತದಲ್ಲಿ ಅತ್ಯಂತ ಹೆಚ್ಚಾಗಿ ಕಾಣಿಸಿಕೊಳ್ಳುವ ಪ್ರಾಣಿ. ಆದರೆ ಅದು ಸೋಮವಾರ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಬಲಿಯಾಗಿದೆ ಎಂದು ಹೇಳಲಾಗಿದೆ.
ಭದ್ರಾ ಅರಣ್ಯದಲ್ಲಿ 67 ವರ್ಷಗಳ ನಂತರ ಕಾಣಿಸಿದ ನೀಲ್ಗಾಯ್!
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನವಿಲು
ಸಾವು
ಮತ್ತೊಂದು
ಪ್ರಕರಣದಲ್ಲಿ
ಬೈಕ್
ಡಿಕ್ಕಿಯಾಗಿ
ರಾಷ್ಟ್ರೀಯ
ಪಕ್ಷಿ
ನವಿಲು
ಸಾವನ್ನಪ್ಪಿರುವ
ಘಟನೆ
ಚಿಕ್ಕಮಗಳೂರು
ಸಮೀಪದ
ಇಂಡಸ್ಟ್ರಿಯಲ್
ಏರಿಯಾದಲ್ಲಿ
ನಡೆದಿದೆ.
ನವಿಲಿಗೆ
ಡಿಕ್ಕಿ
ಹೊಡೆದ
ನಂತರ
ಬೈಕ್
ಸವಾರ
ಪರಾರಿಯಾಗಿದ್ದಾನೆ.
ಉತ್ತರ ಪ್ರದೇಶದಲ್ಲಿ ದೊಣ್ಣೆಯಿಂದ ಬಡಿದು, ಟ್ರಾಕ್ಟರ್ ಹಾಯಿಸಿ ಹುಲಿಯ ಹತ್ಯೆ
ಕೆಲಕಾಲ ಬದುಕಿದ್ದ ನವಿಲು ನಂತರ ಸಾವನ್ನಪ್ಪಿದೆ. ಸ್ಥಳಕ್ಕೆ ಚಿಕ್ಕಮಗಳೂರು ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.