ಚಿಕ್ಕಮಗಳೂರು; ಗ್ರಹಣದ ಟೈಮಲ್ಲಿ ಏನಿದು ಒನಕೆ ಪವಾಡ?
Recommended Video
ಚಿಕ್ಕಮಗಳೂರು, ಡಿಸೆಂಬರ್ 26: ಅಪರೂಪದ ನಭೋಮಂಡಲದ ವೈಶಿಷ್ಟವನ್ನು ನೋಡಲು ಇಂದು ಜಗತ್ತೇ ಕಾತುರದಿಂದ ಕಾದು ಕುಳಿತಿತ್ತು. ಆದರೆ ಮಲೆನಾಡಿಗರು ಈ ಗ್ರಾಮದಲ್ಲಿ ಗ್ರಹಣದ ಪ್ರಾರಂಭ ಹಾಗೂ ಅಂತ್ಯದ ಲೆಕ್ಕಾಚಾರವನ್ನು ಒನಕೆ ಮೂಲಕ ನೋಡುತ್ತಿದ್ದಾರೆ. ಚಿಕ್ಕಮಗಳೂರಿನ ದೊಡ್ಡಮಾಗರಹಳ್ಳಿ ಗ್ರಾಮದಲ್ಲಿ ಒನಕೆಯನ್ನು ಇಟ್ಟು ಗ್ರಹಣದ ಲೆಕ್ಕಾಚಾರವನ್ನು ತಿಳಿಯುವುದು ದಶಕಗಳಿಂದಲೂ ನಡೆದುಕೊಂಡ ಪದ್ಧತಿಯಾಗಿದೆ.
ನಾಳೆ ಅಪರೂಪದ ಕಂಕಣ ಸೂರ್ಯಗ್ರಹಣ; ನೋಡಬೇಕೋ? ಬೇಡವೋ?
ಏನಿದು
ಒನಕೆ
ಪವಾಡ?
ಗ್ರಹಣ
ಪ್ರಾರಂಭವಾದ
ಸರಿಯಾದ
ಕಾಲಕ್ಕೆ
ಮನೆಯ
ಬಾಗಿಲಿನ
ಮುಂದಿನ
ತುಳಸಿಕಟ್ಟೆಯ
ಮುಂಭಾಗ
ನೆಲವನ್ನು
ಸಾರಿಸಿ
ರಂಗೋಲಿ
ಬಿಟ್ಟು
ತಟ್ಟೆಯಲ್ಲಿ
ಸಗಣಿ
ನೀರನ್ನು
ಹಾಕಿ
ವಿಶೇಷವಾಗಿ
ಪೂಜೆ
ಮಾಡಿ
ಒನಕೆಯನ್ನು
ಅದರಲ್ಲಿ
ಇಡಲಾಗುತ್ತದೆ.
ಈ
ವೇಳೆ
ಸರಿಯಾಗಿ
ಗ್ರಹಣ
ಪ್ರಾರಂಭವಾದ
ಕಾಲಕ್ಕೆ
ತಟ್ಟೆಯಲ್ಲಿ
ಅಲುಗಾಡದೇ
ನಿಂತುಕೊಳ್ಳುವ
ಒನಕೆ
ಗ್ರಹಣ
ಮುಕ್ತಾಯವಾದ
ಕೂಡಲೇ
ತಟ್ಟೆಯಿಂದ
ತಾನಾಗಿಯೇ
ಬೀಳುತ್ತದೆ.
ಒನಕೆ
ಬಿದ್ದ
ಕೂಡಲೇ
ಗ್ರಹಣ
ಮುಕ್ತಾಯವಾಗುತ್ತದೆ
ಎಂಬುದು
ಮಲೆನಾಡಿಗರ
ನಂಬಿಕೆ.
ಇಂದಿಗೂ
ಈ
ಆಚರಣೆ
ಮುಂದುವರೆದುಕೊಂಡು
ಬಂದಿದೆ.
ಚಿಕ್ಕಮಗಳೂರು, ಆಲ್ದೂರು ಭಾಗದ ಮಲೆನಾಡಿಗರು ದಶಕಗಳಿಂದಲೂ ಗ್ರಹಣದ ಲೆಕ್ಕಾಚಾರವನ್ನು ಒನಕೆಯ ಮೂಲಕವೇ ತಿಳಿದುಕೊಳ್ಳುತ್ತಿದ್ದಾರೆ. ಪ್ರತಿ ಬಾರಿಯೂ ಚಂದ್ರಗ್ರಹಣ, ಸೂರ್ಯಗ್ರಹಣಗಳ ಸಂದರ್ಭದಲ್ಲಿ ಗ್ರಹಣ ಕಾಲ ತಿಳಿಯಲು ಒನಕೆ ಪವಾಡ ಮಾಡಲಾಗುತ್ತಿದೆ. ಈ ವಿಶಿಷ್ಟ ಆಚರಣೆ ನೋಡಲು ಸುತ್ತಮುತ್ತಲ ಗ್ರಾಮಸ್ಥರು ದೊಡ್ಡಮಾಗರಹಳ್ಳಿಗೆ ಬರುತ್ತಾರೆ.