ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಮಣ್ಣೆತ್ತಿದ್ದು ನೀವಲ್ಲ"; ಚಿಕ್ಕಮಗಳೂರಿನಲ್ಲಿ ಎಚ್ ಡಿಕೆಗೆ ಟಾಂಗ್ ನೀಡಿದ ಸಿ.ಟಿ.ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಚಿಕ್ಕಮಗಳೂರು: ಕಣ್ಣೀರಿಟ್ಟ ನೂತನ ಸಚಿವ ಸಿಟಿ ರವಿ | Oneindia Kannada

ಚಿಕ್ಕಮಗಳೂರು, ಆಗಸ್ಟ್ 21: "ಭೂಕುಸಿತದ ಮಣ್ಣನ್ನು ಕುಮಾರಸ್ವಾಮಿ, ಗುಂಡೂರಾವ್ ತೆಗೆಸಿದ್ದಾ?. ನಮ್ಮ ಸರ್ಕಾರ, ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ" ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಸಚಿವ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ನೆರೆ ಹಾವಳಿ ಪ್ರದೇಶಕ್ಕೆ ಇಂದು ಭೇಟಿ ನೀಡಿದ್ದ ಅವರು, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದರು. ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದರು. ಮೂಡಿಗೆರೆಯ ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ, ಮೊನ್ನೆ ಮೂಡಿಗೆರೆಯಲ್ಲಿ, ರಾಜ್ಯ ಸರ್ಕಾರ ಸಂತ್ರಸ್ತರ ನೆರವಿಗೆ ಬರಲು ತಡ ಮಾಡ್ತಿದೆ ಎಂದಿದ್ದ ಎಚ್ಡಿಕೆ ವಿರುದ್ಧ ಮಾತನಾಡಿದರು.

 ಸಿಎಂ ಆಜ್ಞೆಯಂತೆ ನೆರೆ ಪರಿಸ್ಥಿತಿ ವೀಕ್ಷಣೆಗೆ ಚಿಕ್ಕಮಗಳೂರಿಗೆ ತೆರಳಿದ ಸಿ.ಟಿ.ರವಿ, ಮಾಧುಸ್ವಾಮಿ ಸಿಎಂ ಆಜ್ಞೆಯಂತೆ ನೆರೆ ಪರಿಸ್ಥಿತಿ ವೀಕ್ಷಣೆಗೆ ಚಿಕ್ಕಮಗಳೂರಿಗೆ ತೆರಳಿದ ಸಿ.ಟಿ.ರವಿ, ಮಾಧುಸ್ವಾಮಿ

"ನಾವು ನಿಧಾನ ಮಾಡ್ತಿಲ್ಲ. ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಸರ್ಕಾರ ಕೂಡ ಕೆಲಸ ಮಾಡ್ತಿದೆ. ಮೊದಲು ಇಲ್ಲಿಗೆ ಬರಲು ರಸ್ತೆ ಸಂಪರ್ಕವೂ ಇರಲಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಕುಮಾರಸ್ವಾಮಿ ಅವರ ಅನುಭವ, ಸಲಹೆಯನ್ನು ಧಾರೆ ಎರೆಯಲಿ. ಆದರೆ ರಾಜಕೀಯ ಮಾಡೋದಕ್ಕೆ ಬೇರೆ ವೇದಿಕೆ ಇದೆ" ಎಂದರು.

CT Ravi Spoke Against HDK In Mudigere

ಇದೇ ಸಮಯದಲ್ಲಿ ಸಚಿವ ಮಾಧುಸ್ವಾಮಿ ಸಂತ್ರಸ್ತರಿಗೆ ಭರವಸೆ ನೀಡಿದರು. "ಕೇಂದ್ರ ಸರ್ಕಾರ ನೆರೆ ನಷ್ಟಕ್ಕೆ ಅನುದಾನ ಬಿಡುಗಡೆ ಮಾಡಿದೆ. ಈಗಾಗಲೇ ರಾಜ್ಯ ಸರ್ಕಾರ ಸಂತ್ರಸ್ತರಿಗೆ ಸ್ಪಂದಿಸುವ ಕೆಲಸ ಮಾಡಿದೆ. ಕೇಂದ್ರದ ಹಣಕಾಸು ಸಚಿವರು ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ವಿಪತ್ತು ಘೋಷಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದರು.

ಇನ್ಮುಂದೆ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭ; ಕೆ.ಎಸ್.ಈಶ್ವರಪ್ಪ ಇನ್ಮುಂದೆ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭ; ಕೆ.ಎಸ್.ಈಶ್ವರಪ್ಪ

"ಬೆಳೆಹಾನಿ ಪರಿಹಾರದ ಸಹಾಯ ಧನ ಪರಿಷ್ಕರಣೆ ಆಗಲಿದೆ. ಶಾಶ್ವತ ಪರಿಹಾರದತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಚಿಂತನೆ ನಡೆಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಲ್ಲಿಯೂ ತಡ ಮಾಡದೇ ರಾಜ್ಯ ಸರ್ಕಾರ ಭರದಿಂದ ಕೆಲಸ ಮಾಡಿದೆ" ಎಂದು ತಿಳಿಸಿದರು.

English summary
"NOt kumaraswamy or gunduroa cleared the landslide in chikkamagaluru. The work was done by our government machinery. Our officers worked day and night," said minister ct ravi in mudigere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X