ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಫಿ ಎಸ್ಟೇಟಿನ ಕಾರ್ಮಿಕರ ಬಗ್ಗೆ ಎಚ್ಡಿಕೆ ಟ್ವೀಟ್, ರವಿ ತಿರುಗೇಟು

|
Google Oneindia Kannada News

ಚಿಕ್ಕಮಗಳೂರು, ಜನವರಿ 07: ದೇಶದೆಲ್ಲೆಡೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪರ ವಿರೋಧ ಚರ್ಚೆ, ಪ್ರತಿಭಟನೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಸಿಎಎ, ಎನ್ ಆರ್ ಸಿ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ವಿಪಕ್ಷಗಳು ತಿರುಗೇಟು ನೀಡುತ್ತಾ ಬಂದಿವೆ.

ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿಕೊಂಡು ನೀಡಿರುವ ಹೇಳಿಕೆ ಬಗ್ಗೆ ಟ್ವಿಟ್ಟರಲ್ಲಿ ಚರ್ಚೆ ನಡೆದಿದೆ.

CT Ravi reaction to HD Kumaraswamy tweet on Bangladeshi workers

ಸಿದ್ದರಾಮಯ್ಯ, ಸಿಟಿ ರವಿ ಬ್ಯಾಲೆಟ್-ಬುಲೆಟ್ ಟ್ವಿಟ್ಟರ್ ವಾರ್

"ಬಾಂಗ್ಲಾದವರು ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿದ್ದಾರೆ. ಅವರನ್ನು ಖಾಲಿ ಮಾಡಿಸಿದರೆ ಅಲ್ಲಿ ಕೆಲಸ ಮಾಡುವವರು ಯಾರು?" ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಪ್ರತಿಯಾಗಿ ಬಿಜೆಪಿ ಮುಖಂಡ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿ ಅವರು ನೀಡಿದ ಹೇಳಿಕೆ ಗಮನಿಸಿರಬಹುದು. ಅವರ ಮಾತಿನ ಪ್ರಕಾರ ಹೋಗುವುದಾದರೆ, ಈ ಉದ್ಯೋಗ ಕನ್ನಡಿಗರಿಗೆ ಲಭ್ಯವಾಗಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಉದ್ಯೋಗ ಖಾತ್ರಿಯಾಗಲು ಎನ್ ಆರ್ ಸಿ ಅಗತ್ಯವಿಲ್ಲವೇ? ಇದರಿಂದ ಅಕ್ರಮ ವಲಸಿಗರನ್ನು ಗುರುತಿಸಿ ಹೊರಗಟ್ಟಬಹುದಲ್ಲವೇ? ಎಂದಿದ್ದಾರೆ. ಈ ಬಗ್ಗೆ ಚರ್ಚೆ ಜಾರಿಯಲ್ಲಿದೆ...

English summary
Former Karnataka CM HD Kumaraswamy says that many Bangladeshis are working in Chikkamagaluru estates. CT Ravi reacts with a tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X