ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ಕಣ್ಣೀರಿಟ್ಟ ನೂತನ ಸಚಿವ ಸಿಟಿ ರವಿ

|
Google Oneindia Kannada News

Recommended Video

ಚಿಕ್ಕಮಗಳೂರು: ಕಣ್ಣೀರಿಟ್ಟ ನೂತನ ಸಚಿವ ಸಿಟಿ ರವಿ | Oneindia Kannada

ಚಿಕ್ಕಮಗಳೂರು, ಆಗಸ್ಟ್ 21: ಸಿಎಂ ಯಡಿಯೂರಪ್ಪ ಅವರ ಸೂಚನೆಯಂತೆ ನೆರೆ ವೀಕ್ಷಣೆಗೆ ತೆರಳಿರುವ ಸಚಿವ ಸಿಟಿ ರವಿ ಸಂತ್ರಸ್ತರ ಅಳಲು ಕೇಳಿ ಕಣ್ಣೀರು ಸುರಿಸಿದ್ದಾರೆ.

ಪ್ರವಾಹ ಸೃಷ್ಟಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಏಕಾಏಕಿ ಕ್ಷೀಣಿಸಿದ್ದೇಕೆ?ಪ್ರವಾಹ ಸೃಷ್ಟಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಏಕಾಏಕಿ ಕ್ಷೀಣಿಸಿದ್ದೇಕೆ?

ಸಚಿವ ಸಿಟಿ.ರವಿ ಮತ್ತು ಮಾಧುಸ್ವಾಮಿ ಅವರು ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನೆರೆಯಿಂದಾದ ಹಾನಿಯ ಬಗ್ಗೆ ಪರಿಶೀಲನೆ ಮಾಡಲು ತೆರಳಿದ್ದರು. ಈ ಸಮಯ ಮೂಡಿಗೆರೆ ಬಳಿಯ ಮಲೆಮನೆ ಗ್ರಾಮವೊಂದಕ್ಕೆ ತೆರಳಿದ ಸಂದರ್ಭ ಮನೆ ಕಳೆದುಕೊಂಡವರ ಅಳಲು ಕೇಳಿ ಸಿಟಿ ರವಿ ಅವರೂ ಸಹ ಕಣ್ಣೀರು ಸುರಿಸಿದ್ದಾರೆ.

CT Ravi Get Emotional While Talking To Flood Victims

ಮನೆ ಕಳೆದುಕೊಂಡವರು, ಸಿಟಿ ರವಿ ಅವರನ್ನು ಭೇಟಿಯಾಗಿ ತಮ್ಮ ಕಷ್ಟ ವಿವರಿಸಿದರು. ಇದ್ದ ಒಂದೇ ಮನೆ ಪೂರ್ಣ ಬಿದ್ದುಹೋಗಿದೆ. ಇದ್ದ ತುಂಡು ಭೂಮಿ ನೆರೆಗೆ ಸಿಕ್ಕಿ ಓತಪ್ರೋತವಾಗಿದೆ. ಅದನ್ನು ಹದ ಮಾಡಲು ಆಗದ ಪರಿಸ್ಥಿತಿಗೆ ಬಂದಿದೆ. ನಮಗೆ ಜೀವನವೇ ಇಲ್ಲದಾಗಿದೆ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ ಅವರ ನೋವು ಕೇಳಿ ಸಿಟಿ ರವಿ ಸಹ ಕಣ್ಣೀರಿಟ್ಟಿದ್ದಾರೆ.

ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ

ಸಂತ್ರಸ್ತರಿಗೆ ಶೀಘ್ರ ನೆರವಿನ ಭರವಸೆಯನ್ನು ಸಿಟಿ ರವಿ ಅವರು ನೀಡಿದ್ದಾರೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ್ದ ಸಿಎಂ ಯಡಿಯೂರಪ್ಪ, ಎಲ್ಲ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ವೀಕ್ಷಣೆ ಮಾಡುವಂತೆ ಹೇಳಿದ್ದರು.

CT Ravi Get Emotional While Talking To Flood Victims

ಇತ್ತ ಸಚಿವ ಸುರೇಶ್ ಕುಮಾರ್, ಕೊಡಗಿಗೆ ತೆರಳಿದ್ದು ಕುಶಾಲ್ ನಗರದ ಆಸುಪಾಸಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸಿದ್ದಾರೆ. ಸಂತ್ರಸ್ತರಿಗೆ ಶೀಘ್ರ ಅನುದಾನದ ಭರವಸೆಯನ್ನೂ ನೀಡಿದ್ದಾರೆ.

English summary
Minister CT Ravi today visited flood affcted areas of Chikkamagaluru along with minister Madhuswamy. He get emotional while talking to flood victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X